Advertisement

Road Mishap: ಬೆಂಗಳೂರಿಂದ ಪಣಜಿಗೆ ತೆರಳುತ್ತಿದ್ದ ಬಸ್ ಪಲ್ಟಿ: ಪ್ರಯಾಣಿಕರು ಪಾರು

05:01 PM Sep 08, 2023 | Team Udayavani |

ಪಣಜಿ: ಬೆಂಗಳೂರಿನಿಂದ ಪಣಜಿಗೆ ಪ್ರಯಾಣಿಕರನ್ನು ಹೊತ್ತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗಿನ ಜಾವ 5.30 ರ ಸುಮಾರಿಗೆ ಅಗಶಿ ಮೇಲ್ಸೇತುವೆಯಲ್ಲಿ ಸಂಭವಿಸಿದೆ.

Advertisement

ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಬಸ್ ಬೆಂಗಳೂರಿನಿಂದ ಪಣಜಿಗೆ ಆಗಮಿಸುತ್ತಿತ್ತು ಬೆಳಗ್ಗೆ ಮಡಗಾಂವ್‍ನಿಂದ ಹೊರಟು ಅಂತಿಮ ನಿಲ್ದಾಣ ಪಣಜಿ ಕಡೆಗೆ ಬರುತ್ತಿದ್ದಾಗ ಹೊಸ ಜುವಾರಿ ಸೇತುವೆಯ ಮುಂಭಾಗದ ಫ್ಲೈಟ್ ಬ್ರಿಡ್ಜ್ ನಿಂದ ಸರ್ವಿಸ್ ರಸ್ತೆಗೆ ಬರಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಅಪಘಾತದ ವೇಳೆ ಬಸ್‍ನಲ್ಲಿ 18 ಮಂದಿ ಪ್ರಯಾಣಿಕರಿದ್ದರು.
ಅಗಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಸಂಬಂಧಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: JDS ಹುಡುಗಿ ಅವರಿಗಾದ್ರೂ ಇಷ್ಟ ಆಯ್ತಲ್ಲ..!: ಮೈತ್ರಿ ಕುರಿತು ಇಬ್ರಾಹಿಂ ಪ್ರತಿಕ್ರಿಯೆ

Advertisement

Udayavani is now on Telegram. Click here to join our channel and stay updated with the latest news.

Next