Advertisement

Muddebihal: ರಿಕ್ಷಾ – ಕ್ಯಾಂಟರ್ ನಡುವೆ ಭೀಕರ ಅಪಘಾತ… ಓರ್ವ ಸ್ಥಳದಲ್ಲೇ ಮೃತ್ಯು

09:53 AM Sep 14, 2024 | sudhir |

ಮುದ್ದೇಬಿಹಾಳ: ರಿಕ್ಷಾ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ನಾಲತವಾಡ ರಾಜ್ಯ ಹೆದ್ದಾರಿಯ ಅಡವಿ ಸೋಮನಾಳ ಕ್ರಾಸ್ ಬಳಿ ಶನಿವಾರ(ಸೆ. ೧೪) ರಂದು ಸಂಭವಿಸಿದೆ.

Advertisement

ಚವನಭಾವಿ ಗ್ರಾಮದ ಕರೆಪ್ಪ ನಾಲತವಾಡ (55) ಮೃತ ದುರ್ದೈವಿ.

ಘಟನೆಯಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.

ಇದನ್ನೂ ಓದಿ: US Election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರಂತೆ ಸುನೀತಾ ವಿಲಿಯಮ್ಸ್ ಮತ್ತು ಬುಚ್

Advertisement
Advertisement

Udayavani is now on Telegram. Click here to join our channel and stay updated with the latest news.

Next