Advertisement

ಬೈಕ್‌ಗೆಕಾರು ಡಿಕ್ಕಿ: ಸವಾರ ಸಾವು, ಮಹಿಳೆಗೆ ಗಾಯ

11:25 AM Oct 01, 2020 | sudhir |

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ದೊಡ್ಡೇರಿ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ತೀರ್ವ ಗಾಯಗೊಂಡ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ತಾಲೂಕಿನ ಹಿರೀಸಾವೆ ಹೋಬಳಿ ದೊಡ್ಡೇರಿ ಗ್ರಾಮದ ಗಂಗಯ್ಯ ಎಂಬವರ ಪುತ್ರ ರಾಜು(45) ಮೃತಪಟ್ಟ ವ್ಯಕ್ತಿ. ಅದೇ ಗ್ರಾಮದ ಸರಸಮ್ಮ(46) ಗಾಯ ಗೊಂಡಿದ್ದಾರೆ.

ಘಟನೆ ವಿವರ: ದೊಡ್ಡೇರಿ ಗ್ರಾಮದ ರಾಜು ಕಾರ್ಯನಿಮಿತ್ತ ಹಿರೀಸಾವೆಗೆ ಆಗಮಿಸಿದ್ದು ಕೆಲಸ ಮುಗಿಸಿ ಸ್ವಗ್ರಾಮಕ್ಕೆ ಹಿಂದಿರುಗುವಾಗ ಹಿರೀಸಾವೆ ವೃತ್ತದಲ್ಲಿ ನಿಂತಿದ್ದ ಇದೇ ಊರಿನ ಪಕ್ಕದ ಮನೆಯ ಸರಸಮ್ಮ ಎಂಬವರು ತಾವೂ ಊರಿಗೆ ಬರುವುದಾಗಿ ತಿಳಿಸಿದ್ದಾರೆ. ಸರಸಮ್ಮ ಎಂಬಾಕೆಯನ್ನು ತನ್ನ ಬೈಕ್‌ನ ಹಿಂಬದಿಯಲ್ಲಿಕೂರಿಸಿಕೊಂಡುದೊಡ್ಡೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತೆರಳುತ್ತಿದ್ದ ವೇಳೆ ಹಾಸನ ಕಡೆಯಿಂದ ವೇಗವಾಗಿ ಬಂದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿ ಹಳ್ಳಕ್ಕೆ ಬೈಕ್‌ ಹಾಗೂ ಕಾರು ಉರುಳಿ ಬಿದ್ದಿವೆ.

ಕಾರು ಡಿಕ್ಕಿಯಾದ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದ ಬೈಕ್‌ ಚಾಲಕ ರಾಜುವಿನ ತಲೆ, ದೇಹದ ವಿವಿಧೆಡೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ  ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿಯಲ್ಲಿ ಕುಳಿತಿದ್ದ ಸರಸಮ್ಮಗೆ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೆ ಪೆಟ್ಟಾಗದ ಹಿನ್ನೆಲೆಯಲ್ಲಿ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮೃತ ದೇಹವನ್ನು ಹಿರೀಸಾವೆ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next