Advertisement

ರಸ್ತೆ ವಿವಾದ: ಬೆದರಿಕೆಗೆ ಮನನೊಂದು ಆತ್ಮಹತ್ಯೆ

09:44 AM Dec 10, 2021 | Team Udayavani |

ಮೂಡಿಗೆರೆ: ಮನೆಗೆ ತೆರಳಲು ರಸ್ತೆ ನಿರ್ಮಿಸುವ ವಿಚಾರದಲ್ಲಿ ಪಕ್ಕದವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಗೋಣಿಬೀಡು ಹೋಬಳಿ ಕಸ್ಕೆಬೈಲು ನಿವಾಸಿ ಆನಂದ (57) ಇತ್ತೀಚೆಗೆ ಮನೆ ಬಿಟ್ಟು ಹೋಗಿದ್ದು ಅವರ ಶವ ಹಿಂದೂ ರುದ್ರಭೂಮಿಯಲ್ಲಿ ಪತ್ತೆಯಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಅಶೋಕ ಮತ್ತು ಯಶೋಧ ನೀಡುತ್ತಿದ್ದ ಮಾನಸಿಕ ಕಿರುಕುಳ, ಹಲ್ಲೆ ಬೆದರಿಕೆಗಳೇ ಕಾರಣ ಎಂದು ಮೃತನ ಪುತ್ರ ಅಂಕಿತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾನೆ .

ತಮ್ಮ ಮನೆಗೆ ತಿರುಗಾಡಲು ರಸ್ತೆ ಇಲ್ಲ, ಹಿಂಬದಿಯ ಸರ್ಕಾರಿ ಜಾಗದಲ್ಲಿ ರಸ್ತೆ ಬಿಡಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು ಎನ್ನಲಾಗಿದೆ.

ಈ ಮಧ್ಯೆ ಸರ್ಕಾರಿ ಭೂಮಿಯಲ್ಲಿ ಹಿಡುವಳಿ ಮಾಡಿಕೊಂಡಿರುವ ಅಶೋಕ್ ಮತ್ತವರ ಪತ್ನಿ, ತಮ್ಮ ತಂದೆ ತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

ಪದೇ ಪದೇ ನೀಡುತ್ತಿದ್ದ ಕಿರುಕುಳ ಹಲ್ಲೆ ಬೆದರಿಕೆಯಿಂದ ಬೇಸತ್ತ ತಮ್ಮ ತಂದೆ ಮಾನಸಿಕ ವೇದನೆ ಅನುಭವಿಸುತ್ತಿದ್ದು, ಆತ್ಮಹತ್ಯೆಗೆ ಇದೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ . ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next