Advertisement

ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ: ತೀರ್ಥಹಳ್ಳಿ, ಕುಂದಾಪುರ ರಸ್ತೆ ಸಂಚಾರ ಕೆಲಕಾಲ ಸ್ಥಗಿತ

10:53 AM Jul 16, 2024 | Team Udayavani |

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ‌ ಮಲೆನಾಡು ಭಾಗದಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಹೊಸನಗರ ತಾಲೂಕಿನ ಹಳಗುಂದ ಗ್ರಾಮದಲ್ಲಿ ಗಾಳಿ ಮಳೆಯಿಂದ ಬೃಹತ್ ಮರವೊಂದು ಅಡ್ಡಲಾಗಿ ಬಿದ್ದು ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

Advertisement

ಪರಿಣಾಮ ತೀರ್ಥಹಳ್ಳಿ ಮಾಸ್ತಿಕಟ್ಟೆ ಕುಂದಾಪುರ ರಸ್ತೆ ಕೆಲಕಾಲ ಸ್ಥಗಿತಗೊಂಡು ಮಂಗಳೂರು, ಉಡುಪಿ, ಕುಂದಾಪುರ ಮಣಿಪಾಲ ತೆರಳಲು ವಾಹನ ಸವಾರರು ಪರದಾಡುವಂತಾಯಿತು.

ಮುಂಜಾನೆ ನಾಲ್ಕು ಗಂಟೆಗಳ ವೇಳೆಗೆ ಮರ ಬಿದ್ದಿದ್ದು ಈ ಮಾರ್ಗದಲ್ಲಿ ಬರುವ ವಾಹನಗಳು ನಿಂತಲ್ಲೇ ನಿಂತಿದ್ದು ಬಳಿಕ ಅರಣ್ಯ ಇಲಾಖೆಯ ಸಿಬಂದಿಗಳು ಮರ ತೆರವು ಕಾರ್ಯ ನಡೆಸಿದರು.

ಇದನ್ನೂ ಓದಿ: Sandalwood: ʼಹೆಜ್ಜಾರುʼ ನಂಬಿದ ತಂಡ.. ಹೊಸ ಅನುಭವ ನೀಡುವ ಸಿನಿಮಾವಿದು

Advertisement

Udayavani is now on Telegram. Click here to join our channel and stay updated with the latest news.

Next