Advertisement

ಕುಡಿಯುವ ನೀರಿಗಾಗಿ ರಸ್ತೆ ತಡೆ -ಪ್ರತಿಭಟನೆ

12:00 PM Mar 31, 2018 | Team Udayavani |

ಕಲಬುರಗಿ: ಕಳೆದ ಒಂದು ವಾರದಿಂದ ಕುಡಿಯುವ ನೀರು ಸರಬರಾಜಾಗಿಲ್ಲ ಎಂದು ಶುಕ್ರವಾರ ಸೇಡಂ ರಸ್ತೆಯ ಎಂ.ಆರ್‌.ಮೆಡಿಕಲ್‌ ಕಾಲೇಜಿನ ಎದುರು ವಾರ್ಡ್‌ ಸಂಖ್ಯೆ 45ರ ನಿವಾಸಿಗಳು ಮಾಜಿ ಮೇಯರ್‌ ಚಂದ್ರಿಕಾ ಪರಮೇಶ್ವರ ನೇತೃತ್ವದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಿದರು.

Advertisement

ಖಾಲಿ ಕೊಡಗಳೊಂದಿಗೆ ಬಡಾವಣೆಯ ಮಹಿಳೆಯರು, ಮಕ್ಕಳು ಸೇರಿ ರಸ್ತೆ ತಡೆ ನಡೆಸಿ, ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಜಲಮಂಡಳಿಗೆ ಹಿಡಿ ಶಾಪ ಹಾಕಿದರು.

ಪ್ರತಿಭಟನೆಯಲ್ಲಿ ವಿಜಯಲಕ್ಮೀ, ರಾಘವೇಂದ್ರ, ಮಲ್ಲಿಕಾರ್ಜುನ ವಠಾರ ಹಾಗೂ ಇತರರು ಭಾಗವಹಿಸಿದ್ದರು. ಕುಡಿಯುವ ನೀರಿಗಾಗಿ ರಸ್ತೆ ತಡೆ ನಡೆಸಿದ್ದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಸಾರ್ವಜನಿಕರು ಕೆಲ ಕಾಲ ಪರದಾಡಬೇಕಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next