Advertisement

ರಸ್ತೆ ಅಪಘಾತ: ಟೆಕ್ಕಿ ಸಾವು

05:49 AM Feb 09, 2019 | |

ಬೆಂಗಳೂರು: ತರಬೇತಿಗೆಂದು ಬಂದಿದ್ದ ಉತ್ತರಪ್ರದೇಶ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ವೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಉತ್ತರಪ್ರದೇಶ ಮೂಲದ ಮಂತ್ರಿಸಿಂಗ್‌(29) ಮೃತ ಸಾಫ್ಟ್ವೇರ್‌ ಎಂಜಿನಿಯರ್‌. ಈ ಸಂಬಂಧ ಟಾಟಾಸುಮೋ ಚಾಲಕನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಶವಂತಪುರ ಸಂಚಾರ ಠಾಣೆ ಪೊಲೀಸರು ಹೇಳಿದರು. ಮಂತ್ರಿಸಿಂಗ್‌ ಸಾಫ್ಟ್ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತರಬೇತಿಗೆಂದು ಬೆಂಗಳೂರಿಗೆ ಬಂದಿದ್ದರು.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಗುರುವಾರ ರಾತ್ರಿ ಸ್ನೇಹಿತರ ಜತೆ ಹೋಟೆಲ್‌ವೊಂದರಲ್ಲಿ ಊಟ ಮುಗಿಸಿದ ಮಂತ್ರಿಸಿಂಗ್‌, ತಡರಾತ್ರಿ 12.30ರ ಸುಮಾರಿಗೆ ಮಲ್ಲೇಶ್ವರದಿಂದ ಆಟೋದಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ಹೋಗಿದ್ದಾರೆ.

ಆಟೋದಿಂದ ಇಳಿದು ಹೋಟೆಲ್‌ ಕಡೆ ನಡೆದು ಹೋಗುವಾಗ ವೇಗವಾಗಿ ಬಂದ ಟಾಟಾಸುಮೋ ಮಂತ್ರಿಸಿಂಗ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next