Advertisement

ಸಂಪಾಜೆ: ದೇಶ ಸುತ್ತಲು ಹೊರಟ ಜಾರ್ಖಂಡ್ ಮೂಲದ ಇಬ್ಬರು ರಸ್ತೆ ಅಪಘಾತದಲ್ಲಿ ಸಾವು

10:03 AM Jan 12, 2020 | keerthan |

ಸುಳ್ಯ: ಇಲ್ಲಿನ ಸಂಪಾಜೆಯ ಕೊಯಿನಾಡಿನಲ್ಲಿ ಬಸ್ ಮತ್ತು ಬೈಕಿನ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

Advertisement

ಸಾವನ್ನಪ್ಪಿದ ಇಬ್ಬರು ಜಾರ್ಖಂಡ್ ಮೂಲದವರಾಗಿದ್ದು, ಇದುವರೆಗೆ ಗುರುತು ಪತ್ತೆಯಾಗಿಲ್ಲ.

ಜಾರ್ಖಂಡ್ ಮೂಲದ ಇಬ್ಬರು ಯುವಕರು ಬೈಕ್‌ನಲ್ಲಿ ದೇಶ ಸುತ್ತುವ ಉದ್ಧೇಶದಿಂದ ಹೊರಟಿದ್ದರು. ಅವರು ಇಂದು ಬೆಳಿಗ್ಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುವಾಗ ಕೊಯಿನಾಡಿನಲ್ಲಿ ಬಸ್‌ಗೆ ಢಿಕ್ಕಿಯಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಸರಕಾರಿ ಬಸ್ಸು  ಸಿದ್ಧಾಪುರದಿಂದ ಮಂಗಳೂರಿಗೆ ಬರುತ್ತಿತ್ತು.

ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next