Advertisement

ಬಿಹಾರ ಮಾನವ ಸರಪಣಿ: ಶ್ವೇತಪತ್ರಕ್ಕೆ ಆರ್‌ಜೆಡಿ ಆಗ್ರಹ

07:06 PM Jan 22, 2018 | Team Udayavani |

ಪಟ್ನಾ : ಬಿಹಾರ ಸರಕಾರ ನಿನ್ನೆ ಭಾನುವಾರ ರಾಜ್ಯಾದ್ಯಂತ ನಡೆಸಿದ್ದ ಮಾನವ ಸರಪಣಿಯನ್ನು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷ ಸೂಪರ್‌ಫ್ಲಾಪ್‌ ಎಂದು ವರ್ಣಿಸಿದೆ. 

Advertisement

ಅಂತೆಯೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಏರ್ಪಡಿಸಿದ ಮಾನವ ಸರಪಣಿ ಮತ್ತು ವಿಕಾಸ ಸಮೀಕ್ಷಾ ಕಾರ್ಯಕ್ರಮಕ್ಕೆ ಸರಕಾರ ಮಾಡಿರುವ ಖರ್ಚು ವೆಚ್ಚಗಳ ಕುರಿತಾಗಿ ಶ್ವೇತಪತ್ರವನ್ನು ಹೊರತರಬೇಕೆಂದು ಆರ್‌ಜೆಡಿ ಒತ್ತಾಯಿಸಿದೆ. 

ಬಿಹಾರ ಸರಕಾರ ಬಾಲ ವಿವಾಹ ಮತ್ತು ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವ ದಿಶೆಯಲ್ಲಿ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಮಾನವ ಸರಪಣಿಯನ್ನು ಏರ್ಪಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next