Advertisement

 ಬೆಳ್ತಂಗಡಿ: ರೈತಬಂಧು ಅಭಿಯಾನ: 75 ಫಲಾನುಭವಿಗಳ ಆಯ್ಕೆ

07:49 PM Aug 03, 2021 | Team Udayavani |

ಬೆಳ್ತಂಗಡಿ: ಭೂಮಿಯ ಫಲವತ್ತತೆ ವೃದ್ಧಿಸುವ ಸಲುವಾಗಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೈತಬಂಧು ಅಭಿಯಾನ ಪರಿಚಯಿಸಿದೆ. ಬೆಳ್ತಂಗಡಿ ತಾಲೂಕಿನ 75 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. 75ನೇ ಸ್ವಾತಂತ್ರೊéàತ್ಸವ ಆಚರಣೆಯಂದು ಅಭಿಯಾನಕ್ಕೆ ಚಾಲನೆ ದೊರೆಯಲಿದೆ.

Advertisement

ಆ.15ರಿಂದ ಅಕ್ಟೋಬರ್‌ 15ರವರೆಗೆ ಅಭಿಯಾನ ನಡೆಯಲಿದ್ದು, ಪ್ರತೀ ಗ್ರಾ.ಪಂ.ಗಳಲ್ಲಿ 25ಮಂದಿ ಪಲಾನುಭವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಬೆಳ್ತಂಗಡಿ ತಾಲೂಕಿನಲ್ಲಿ ಪಡಂಗಡಿ ಗ್ರಾ.ಪಂ.-5, ನಡ ಗ್ರಾ.ಪಂ., ಮಾಲಾಡಿ, ಲಾೖಲ, ಉಜಿರೆ, ಚಾರ್ಮಾಡಿ, ಮಡಂತ್ಯಾರು, ಬಂದಾರು ಗ್ರಾ.ಪಂ.ಗಳಿಂದ ಅರ್ಜಿ ಸಲ್ಲಿಸಿದ ತಲಾ 10 ಮಂದಿಯಂತೆ 75 ಮಂದಿ ಫಲಾನುಭವಿಗಳನ್ನು ಆಯ್ಕೆಮಾಡಲಾಗಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಫಲಾನುಭವಿಗಳಿಗೆ ತರಬೇತಿ ನೀಡಲು ತೋಟಗಾರಿಕೆ ಇಲಾಖೆ ಮದ್ದಡ್ಕದಲ್ಲಿ ಮಾದರಿ ತೊಟ್ಟಿ ನಿರ್ಮಿಸಿ ಪ್ರಾತ್ಯಕ್ಷಿಕೆ ನೀಡಲಿದೆ. ಗ್ರಾ.ಪಂ. ಮಟ್ಟದಲ್ಲಿ ಕನಿಷ್ಠ 25 ತೊಟ್ಟಿ ಅನುಷ್ಠಾನದ ಗುರಿ ನೀಡಲಾಗಿದೆ. ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಎರೆಹುಳು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ರೈತ ಮಿತ್ರ ಎರೆಹುಳು ಗೊಬ್ಬರ ಉತ್ಪಾದನೆಯಿಂದ ಶೇ. 25-30 ವೆಚ್ಚ ಕಡಿಮೆ ಜತೆಗೆ ಎರೆಹುಳು ಗೊಬ್ಬರ ಸತತ ಬಳಕೆಯಿಂದ ಮಣ್ಣಿನಲ್ಲಿರುವ ಹಾನಿಕಾರಕ ಲವಣಗಳ ಪ್ರಮಾಣ ಕಡಿಮೆ ಸೇರಿದಂತೆ ಭೂಮಿಯ ಫಲವತ್ತತೆ ಕಾಪಾಡುವ ಸಲುವಾಗಿ ರೈತಬಂಧು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಎರೆಹುಳು ತೊಟ್ಟಿ ಮಾದರಿ 1

Advertisement

ಅಂದಾಜು ಮೊತ್ತ         27 ಸಾವಿರ

ಕೂಲಿ ಮೊತ್ತ    5,873

ಸಾಮಗ್ರಿ ಮೊತ್ತ             18,000

ಉದ್ದ   18 ಅಡಿ

ಅಗಲ  9 ಅಡಿ

ಎತ್ತರ  4 ಅಡಿ

ಮಾದರಿ: 2

ಅಂದಾಜು          21 ಸಾವಿರ

ಕೂಲಿ     4,891

ಸಾಮಗ್ರಿ                15,000

ಉದ್ದ   12 ಅಡಿ

ಅಗಲ   9 ಅಡಿ

ಎತ್ತರ    4 ಅಡಿ

Advertisement

Udayavani is now on Telegram. Click here to join our channel and stay updated with the latest news.

Next