Advertisement

ಭೂಗತ ಲೋಕದ ಕಥೆಯಲ್ಲಿ ರಿಷಭ್!

04:17 AM Jun 02, 2020 | Lakshmi GovindaRaj |

ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಸುದ್ದಿಯಾದ ಕೆಲವೇ ಕೆಲವು ನಟರಲ್ಲಿ ನಿರ್ದೇಶಕ, ನಟ ರಿಷಭ್ ಶೆಟ್ಟಿ ಕೂಡಾ ಒಬ್ಬರು. ಮಗನ ಹುಟ್ಟುಹಬ್ಬದಿಂದ ಹಿಡಿದು ಹೊಸ ಸಿನಿಮಾಗಳ ಕುರಿತು ರಿಷಭ್ ಸಖತ್ ಸೌಂಡ್ ಮಾಡಿದರು. ಈಗ ಅವರ ಸುತ್ತ ಮತ್ತೊಂದು‌ ಸಿನಿಮಾದ ಸುದ್ದಿ ಕೇಳಿ ಬರುತ್ತಿದೆ.

Advertisement

ಅದು ನೈಜ ಕಥೆ ಎಂಬುದು ಮತ್ತೊಂದು ವಿಶೇಷ. ಹೌದು, ರಿಷಭ್ ಅಂಡರ್ ವಲ್ಡ್ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಭೂಗತ ಲೋಕದಲ್ಲಿ ಕೇಳಿಬಂದ ಅಮರ್ ಆಳ್ವಾ ಕುರಿತಾಗಿ ಸಿನಿಮಾ ಮಾಡಲಿದ್ದಾರಂತೆ. ಈ‌‌ ಚಿತ್ರವನ್ನು ನಿತೇಶ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ರಿಷಭ್ ಜೊತೆ ಸಹಾಯಕರಾಗಿದ್ದ ರಿಷಭ್ ಅವರಿಗೆ ಇದು‌ ಮೊದಲ ಸಿನಿಮಾ. ಇಬ್ಬರು ಜೊತೆಯಾಗಿ ಸೇರಿ ಕಥೆ ರಚಿಸಿದ್ದಾರಂತೆ.

ಈಗಾಗಲೇ ಗಿರಿಕಥೆ ಎಂಬ ಸಿನಿಮಾದಲ್ಲಿ ರಿಷಭ್ ನಟಿಸುತ್ತಿರುವ ಸುದ್ದಿ ಬಂದಿದೆ. ಇದಲ್ಲದೇ ಗರುಡ ಗಮನ ರಿಷಭ ವಾಹನ ಚಿತ್ರದಲ್ಲೂ ನಟಿಸುತ್ತಿದ್ದು, ರುದ್ರ ಪ್ರಯಾಗ ಚಿತ್ರಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next