Advertisement

16 ವರ್ಷದ ರಿಚಾರಿಂದ 1 ಲಕ್ಷ ರೂ.

12:03 AM Mar 30, 2020 | Sriram |

ಕೋಲ್ಕತಾ: ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ 16 ವರ್ಷದ ಆಲ್‌ರೌಂಡರ್‌ ರಿಚಾ ಘೋಷ್‌, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದರೊಂದಿಗೆ ಕೋವಿಡ್-19 ಮಟ್ಟ ಹಾಕುವ ಕಾರ್ಯಕ್ಕೆ ಸರಕಾರದೊಂದಿಗೆ ಕೈ ಜೋಡಿಸಿದ್ದಾರೆ. “ಚೆಕ್‌ ಅನ್ನು ಸಿಲಿಗುರಿ ಜಿಲ್ಲೆಯ ಜಿಲ್ಲಾಧಿಕಾರಿ ಸುಮಂತ್‌ ಕೈಗೆ ರಿಚಾ ಘೋಷ್‌ ತಂದೆ ಮನಬೇಂದ್ರ ಘೋಷ್‌ ಶನಿವಾರ ಹಸ್ತಾಂತರ ಮಾಡಿದರು’ ಎಂದು ಬಂಗಾಲ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next