Advertisement

ರಾಯಧನ ವಾಪಸ್‌: ಒಡಿಶಾಗೆ 1 ಲಕ್ಷ ಕೋಟಿ ಬಾಕಿ ಬರಬೇಕು!

01:25 AM Aug 17, 2024 | Team Udayavani |

ಹೊಸದಿಲ್ಲಿ: 2005ರಿಂದ ಪೂರ್ವಾನ್ವಯವಾಗುವಂತೆ ಲೆವಿ ಮತ್ತು ರಾಯಧನವನ್ನು ರಾಜ್ಯಗಳು ಪಡೆದು ಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದ ಬೆನ್ನಲ್ಲೇ ಒಡಿಶಾಗೆ 1 ಲಕ್ಷ ಕೋಟಿ ರೂ. ಬಾಕಿ ಇರುವುದು ತಿಳಿದುಬಂದಿದೆ.

Advertisement

2026ರ ಎಪ್ರಿಲ್‌ನಿಂದ ಒಡಿಶಾ ಸರಕಾರ ಕೇಂದ್ರ ಸರಕಾರದಿಂದ ಮುಂದಿನ 12 ವರ್ಷಗಳ ಕಾಲ ವಾರ್ಷಿಕ 12,000 ಕೋಟಿ ರೂ.ಗಳನ್ನು ಪಡೆದುಕೊಳ್ಳಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಆಂಧ್ರಪ್ರದೇಶ ಸಹ 5ರಿಂದ 6 ಸಾವಿರ ಕೋಟಿ ರೂ. ಪಡೆದುಕೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ತೆಲಂಗಾಣ 300 ಕೋಟಿ ರೂ. ಪಡೆದುಕೊಳ್ಳಲಿದೆ.

ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಝಾರ್ಖಂಡ್‌ ಮತ್ತು ತಮಿಳುನಾಡುಗಳು ಸಹ ಸಾವಿರಾರು ಕೋಟಿ ರೂ. ಪಡೆದು ಕೊಳ್ಳಲಿವೆ. ಇನ್ನೂ ಲೆಕ್ಕಾಚಾರ ನಡೆ ಯುತ್ತಿದ್ದು, ಸಾವಿರಾರು ಕೋಟಿ ರೂ. ದೊರೆ ಯಬಹುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next