Advertisement

Kasaragod ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ನಿವೃತ್ತ ಅಧ್ಯಾಪಕನ ಶವ ಪತ್ತೆ

10:12 PM Feb 13, 2024 | Team Udayavani |

ಕಾಸರಗೋಡು: ಕುತ್ತಿಕ್ಕೋಲ್‌ ಕರಿವಿಂಜಂ ನಿವಾಸಿ, ನುಳ್ಳಿಪ್ಪಾಡಿ ನೇತಾಜಿ ಹೌಸಿಂಗ್‌ ಕಾಲನಿ ನಿವಾಸಿ ನಿವೃತ್ತ ಅಧ್ಯಾಪಕ ಇ. ಮಾಧವನ್‌ (59) ಅವರ ಮೃತ ದೇಹ ಕುತ್ತಿಕ್ಕೋಲ್‌ ಕರಿವಿಂಜಂ ತರವಾಡು ಮನೆಯ ಹಿತ್ತಿಲಿನಲ್ಲಿ ಮರಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಶಿಕ್ಷಕಿಯಾಗಿರುವ ಪತ್ನಿ ಜ್ಯೋತಿಲಕ್ಷ್ಮೀ ಅವರನ್ನು ಸ್ಕೂಟರ್‌ನಲ್ಲಿ ಮಂಗಳವಾರ ಬೆಳಗ್ಗೆ ನಾಯಮ್ಮಾರ ಮೂಲೆಯ ತನ್ಬಿಹುಲ್‌ ಇಸ್ಲಾಂ ಹೈಯರ್‌ ಸೆಕೆಂಡರಿ ಶಾಲೆಗೆ ಬಿಟ್ಟು ಬಳಿಕ ಕುತ್ತಿಕ್ಕೋಲ್‌ನ ತರವಾಡು ಮನೆಗೆ ಹೋಗಿದ್ದರು. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿ ನಾಪತ್ತೆ
ಕಾಸರಗೋಡು: ಕಾಂಞಂಗಾಡ್‌ ನಗರದ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಇಪ್ಪತ್ತಮೂರರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ.

ಬೆಳಗ್ಗೆ ಮನೆಯಿಂದ ಹೋಗಿದ್ದ ಆಕೆ ರಾತ್ರಿಯಾದರೂ ಮನೆಗೆ ವಾಪಸಾಗದಿರುವುದರಿಂದ ಪೊಲೀಸರಿಗೆ ದೂರು ನೀಡಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next