Advertisement

ನಿವೃತ್ತ ನೌಕರರಿಗೆ ಸನ್ಮಾನ

11:54 AM Aug 04, 2018 | |

ಮುದ್ದೇಬಿಹಾಳ: ಸರಕಾರಿ ಸೇವೆ ಜನಸಾಮಾನ್ಯರ ಸೇವೆಯಾಗಿದ್ದು ಸರಕಾರಿ ನೌಕರಿ ಪಡೆದ ಪ್ರತಿಯೊಬ್ಬರೂ ಜನಸೇವೆಗೆ ಸದಾಕಾಲ ಮುಂದಾಗಬೇಕು ಎಂದು ಲೋಕೊಪಯೋಗಿ ಇಲಾಖೆ ಸಹಾಯ ಅಧಿಕಾರಿ ಅರುಣಕುಮಾರು ಪಾಟೀಲ ಹೇಳಿದರು.

Advertisement

ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜನರಿಗಾಗಿ ಸರಕಾರ ಸಾಕಷ್ಟು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರಕಾರಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಎಂದರು.

ಇದೇ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರ್‌.ಎಂ. ಪುರಾಣಿಕಮಠ, ಎಂ.ಎಚ್‌. ಮನಗೂಳಿ, ಎಂ.ಎ. ಮುಜಾವರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ವೇಳೆ ದಲಿತ ಮುಖಂಡ ಚನ್ನಪ್ಪ ವಿಜಯಕರ್‌, ಯಲ್ಲಪ್ಪ ಚಲವಾದಿ, ಹರೀಶ ನಾಟಿಕರ, ಕಿರಿಯ ಎಂಜಿನಿಯರ್‌ ಎ.ಜಿ. ಗುಜರಿ, ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ಬಸನಗೌಡ, ಎಂ.ಎ. ಢವಳಗಿ, ಎ.ಬಿ.ಅಂಕಲಗಿ, ಆನಂದ ಆರೋಢ, ಬಿ.ವಿ.ಮಠ, ಜಿ.ಎಸ್‌.ಕಂಠಿ, ಐ.ಎಸ್‌.ಹಿರೇಮಠ, ಮಹಾಂತೇಶ ಬಿರಾದಾರ, ನಾಗಮ್ಮ ತಳವಾರ, ಶೈಲಾ ಡೊಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next