Advertisement

ಗೋವಾದಲ್ಲಿ ಗಣಿ ಉತ್ಖನನಕ್ಕೆ ನಿರ್ಬಂಧ;ಕಂಪನಿಗಳಿಗೆ ಭಾರಿ ಹೊಡೆತ

07:24 PM May 05, 2022 | Team Udayavani |

ಪಣಜಿ: ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದ ಅನುಸಾರ ಗೋವಾ ರಾಜ್ಯದಲ್ಲಿ ಗಣಿ ಉತ್ಖನನಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿಟ್ಟಿನಲ್ಲಿ ಇದೀಗ ಗೋವಾ ಸರ್ಕಾರ ನಿರ್ಧಾರ ಕೈಗೊಂಡಿದ್ದು ಜೂನ್ 7 ರ ಒಳಗೆ ಗಣಿಗಳ ಮಾಲೀಕತ್ವ ಬಿಟ್ಟುಕೊಡುವಂತೆ ಆದೇಶಿಸಲಾಗಿದೆ.

Advertisement

ಗೋವಾ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಗಣಿಗಳಿಂದ ಅದಿರು ಉತ್ಖನನ ಸಂಪೂರ್ಣ ಬಂದ್ ಆಗಿದೆ. ಈ ವಿಷಯದಲ್ಲಿ ಸದ್ಯ ರಾಜ್ಯದಲ್ಲಿ ರಾಜಕೀಯವಲಯದಲ್ಲಿ ಆರೋಪ ಪ್ರತ್ಯಾರೋಪ ಕೇಳಿಬರುತ್ತಿದೆ. ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪು ಪ್ರಕಟಿಸಿದ್ದು ಗೋವಾದಲ್ಲಿನ ಗಣಿ ಮಾಲೀಕರಿಗೆ ಗಣಿಗಳ ಮಾಲೀಕತ್ವವನ್ನು ಬಿಟ್ಟುಕೊಡುವಂತೆ ಆದೇಶ ನೀಡಿದೆ.

ಮಯೆಮ್ ನಿಂದ ಅದಿರು ಸಾಗಾಟಕ್ಕೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠ ನಿರ್ಬಂಧ ಹೇರಿದೆ. ಮುಂಬಯಿ ಹೈಕೋರ್ಟ್ ನ ಗೋವಾ ಪೀಠವು ಮಯೆಮ್ ಗ್ರಾಮದಿಂದ ಅಕ್ರಮ ಅದಿರು ಸಾಗಿಸುವುದನ್ನು ತಡೆಯಲು ಮಧ್ಯಂತರ ಆದೇಶವನ್ನು ಹೊರಡಿಸಿದೆ. ಮಯೆಮ್ ಗ್ರಾಮದಿಂದ ಅದಿರು ಸಾಗಾಟ ಸ್ಥಗಿತಗೊಂಡಿರುವುದರಿಂದ ಗಣಿ ಕಂಪನಿಗಳಿಗೆ ಇದೀಗ ಭಾರಿ ಹೊಡೆತ ಬಿದ್ದಂತಾಗಿದೆ. ಈ ಖನಿಜ ಟ್ರಕ್‍ಗಳ ಮೇಲ್ವಿಚಾರಣೆ ಮಾಡಲು ಗ್ರಾಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯವಿಧಾನವನ್ನು ಸ್ಥಾಪಿಸುವ ವರೆಗೆ ಆದೇಶ ಜಾರಿಯಲ್ಲಿರುತ್ತದೆ ಎಂದು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next