Advertisement

ಟಾಟಾ ವಿರುದ್ಧದ ಸಮನ್ಸ್‌ಗೆ ತಡೆ

11:23 AM Aug 02, 2017 | Team Udayavani |

ಬೆಂಗಳೂರು: ಟಾಟಾ ಗ್ರೂಪ್‌ ಆಫ್ ಕಂಪೆನಿ ಮಾಲೀಕ ರತನ್‌ ಟಾಟಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶುತೋಷ್‌ ಪಾಂಡೆ ವಿರುದ್ಧ ಗ್ರಂಥಸ್ವಾಮ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅಧೀನ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

 ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ರತನ್‌ ಟಾಟಾ ಹಾಗೂ ಅಶುತೋಷ್‌ ಪಾಂಡೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ  ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು.

ಜೊತೆಗೆ ಪ್ರತಿವಾದಿಗಳಾದ ಹಲಸೂರು ಪೊಲೀಸ್‌ ಠಾಣೆ ಠಾಣಾಧಿಕಾರಿ ಹಾಗೂ ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಡಿ.ಕೆ ಹಾವನೂರು ಅವರಿಗೆ ನೋಟಿಸ್‌ ಜಾರಿಗೊಳಿಸಿ ಆಗಸ್ಟ್‌ 18ಕ್ಕೆ ವಿಚಾರಣೆ ಮುಂದೂಡಿತು. ತಾವು 2013ರಲ್ಲಿ ಬರೆದ ” ಮಾರ್ಚ್‌ ಆಫ್ ಫ‌ೂಟ್‌ ಸೋಲ್ಜರ್‌’ ಪುಸ್ತಕವನ್ನು  ಟಾಟಾ  ಗ್ರೂಪ್‌ ಆಫ್ ಕಂಪೆನಿಯ ಸಹ ಕಂಪೆನಿಯಾದ ಲ್ಯಾಂಡ್‌ ಮಾರ್ಕ್‌ ಬುಕ್‌ ಸ್ಟೋರ್ ಕಂಪೆನಿಯ ವೆಬ್‌ಸೈಟ್‌ನಲ್ಲಿ ಪುಸ್ತಕ ಮಾರಾಟಕ್ಕಿದೆ ಎಂದು ಪ್ರಕಟಿಸಲಾಗಿತ್ತು.

ಆದರೆ, ನಾನು ಕಂಪನಿ ಜತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಆರೋಪಿಸಿ ಗ್ರಂಥಸ್ವಾಮ್ಯ ಹಕ್ಕು ಕಾಯ್ದೆ ಅಡಿಯಲ್ಲಿ ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಡಿ.ಕೆ ಹಾವನೂರು ಹಲಸೂರು ಠಾಣೆ ಪೊಲೀಸರಿಗೆ ಟಾಟಾ  ಗ್ರೂಪ್‌ ಆಫ್ ಕಂಪೆನಿ ಮಾಲೀಕ ರತನ್‌ ಟಾಟಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶುತೋಷ್‌ ಪಾಂಡೆ ವಿರುದ್ಧ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next