Advertisement

ಅಂಬೇಡ್ಕರ್‌ ಚಿಂತನೆಗಳನ್ನು ಗೌರವಿಸಿ: ಶಾಸಕ ಕಾಮತ್‌

12:23 PM Apr 08, 2022 | Team Udayavani |

ಜಪ್ಪು: ಪಾಲಿಕೆಯ ಜಪ್ಪು ವಾರ್ಡಿನಲ್ಲಿ ನೂತನ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್‌ ಅವರು ಭೂಮಿಪೂಜೆ ನೆರವೇರಿಸಿದರು.

Advertisement

ಬಳಿಕ ಅವರು ಮಾತನಾಡಿ, ನಗರದ ವಿವಿಧ ಭಾಗಗಳಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ತೀರ್ಮಾನಿಸಿದ್ದು, ಸಮುದಾಯದ ಒಗ್ಗಟ್ಟಿಗೆ ಅಂಬೇಡ್ಕರ್‌ ಭವನ ಸಹಕಾರಿಯಾಗಲಿದೆ. ಸಂವಿಧಾನ ಶಿಲ್ಪಿ, ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಚಿಂತನೆಗಳನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

ಜಪ್ಪು ವಾರ್ಡ್‌ ಮಹಾನ ಗರ ಪಾಲಿಕೆ ಸದಸ್ಯ ಭರತ್‌ ಕುಮಾರ್‌ ಎಸ್‌., ಪಾಲಿಕೆ ನಾಮನಿರ್ದೇಶಿತ ಸದಸ್ಯ ರಮೇಶ್‌ ಕಂಡೆಟ್ಟು, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುರೇಖಾ ರಾವ್‌, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೌತಮ್‌ ಬೋಳಾರ್‌, ಎಸ್‌ಸಿ ಮೋರ್ಚಾ ಅಧ್ಯಕ್ಷ ರಘುವೀರ್‌ ಬಾಬುಗುಡ್ಡೆ, ಮಂಡಲ ಅಲ್ಪಸಂಖ್ಯಾಕ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್‌ ಡಿ’ಸಿಲ್ವ, ಅರ್ಶದ್‌ ಪೋಪಿ, ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಘಣಶ್ಯಾಮ್‌, ಶಕ್ತಿಕೇಂದ್ರ ಅಧ್ಯಕ್ಷೆ ಅಮಿತಾ ಕೆ., ಬೂತ್‌ ಅಧ್ಯಕ್ಷ ವಾಣೀಶ್ರೀ, ತರುಣ್‌ ಬಪ್ಪಾಲ್‌, ಜನಾರ್ದನ್‌, ರವೀಂದ್ರ ಎಸ್‌, ಶೈಲೇಶ್‌ ಕುಮಾರ್‌, ಪದ್ಮಾಕರ್‌, ಪ್ರಶಾಂತ್‌ ಕನಕರಬೆಟ್ಟು, ನಿರಂಜನ್‌ ಕುಮಾರ್‌ ಎಸ್‌., ಹೇಮಂತ್‌, ರಾಜೇಶ್‌ ಕುಮಾರ್‌, ವಿಜಯ್‌ ಬೆನೆಡಿಕ್ಟ್, ಚಿತ್ರಾ ಬಪ್ಪಾಲ್‌, ನವೀನ್‌, ಬಾಬು, ಸಂತೋಷ್‌ ಕೋಟ್ಯಾನ್‌, ಸಂದೀಪ್‌ ಎಸ್‌., ಚಂದ್ರಹಾಸ್‌, ರಾಜ, ಕಿಶೋರ್‌, ತಾರಮಣಿ, ಇಂದಿರಾ, ಬೇಬಿ, ದೀನಾ, ಗಾಯತ್ರಿ ದೇವಿ, ವಿಶ್ವನಾಥ್‌ ಉಳ್ಳಾಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next