Advertisement

ಸಸಿಹಿತ್ಲು: ನಾಪತ್ತೆಯಾದವರ ಪತ್ತೆಗೆ ಹಗಲು-ರಾತ್ರಿ ಶೋಧ ಕಾರ್ಯ

10:21 AM Jan 12, 2021 | Team Udayavani |

ಸಸಿಹಿತ್ಲು: ಕಳೆದ ರವಿವಾರ ನಡೆದ ಸಸಿಹಿತ್ಲು ಮುಂಡ ಬೀಚ್‌ನಲ್ಲಿ ನಡೆದ ಅವಘಡದಲ್ಲಿ ನಾಪತ್ತೆಯಾಗಿರುವ ತೋಕೂರು ನಿವಾಸಿ ಬಾಬು ಯಾನೆ ದಾಮೋದರ ಶೆಟ್ಟಿ ಅವರ ಪತ್ತೆಗೆ ಸ್ಥಳೀಯ ಜನಪ್ರತಿನಿಧಿಗಳ ತಂಡವೊಂದು ಹಗಲು-ರಾತ್ರಿ ಶೋಧ ಕಾರ್ಯ ನಡೆಸಿದ್ದಾರೆ.

Advertisement

ಬೀಚ್‌ಗೆ ವಿಹಾರಕ್ಕೆಂದು ಬಂದ 8 ಮಂದಿಯ ತಂಡದಲ್ಲಿ 6 ಮಂದಿ ಸ್ಥಳೀಯರ ಸಹಾಯದಿಂದ ರಕ್ಷಣೆಗೊಳಗಾಗಿ, ತಂಡದಲ್ಲಿದ ಸುಂದರ ಶೆಟ್ಟಿ ಅವರು ನೀರಿನ ಸೆಳೆತದಿಂದ ಸಾವನ್ನಪ್ಪಿದ್ದು ಅವರ ಮೃತ ದೇಹವು ಅಂದೇ ಸಿಕ್ಕಿತ್ತು.

ಘಟನೆಯಲ್ಲಿ ನಾಪತ್ತೆಯಾಗಿರುವ ದಾಮೋದರ ಅವರ ಪತ್ತೆಗೆ ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಧನ್‌ರಾಜ್ ಕೋಟ್ಯಾನ್, ಚಂದ್ರಕುಮಾರ್, ಅನಿಲ್ ಪೂಜಾರಿ ಸಹಿತ ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಕರ್ಕೇರ, ಧರ್ಮಾನಂದ ಶೆಟ್ಟಿಗಾರ್ ತೋಕೂರು ಸ್ಥಳೀಯ ಮೀನುಗಾರರು, ಗ್ರಾಮಸ್ಥರು ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next