Advertisement

ಮರು ಬಿಡುಗಡೆಯತ್ತ ರಮೇಶ್‌ ಅರವಿಂದ್‌ ಸಿನಿಮಾ

01:08 PM Oct 11, 2020 | Suhan S |

ರಮೇಶ್‌ ಅರವಿಂದ್‌ ನಾಯಕರಾಗಿರುವ ಚಿತ್ರವೊಂದು ಚಿತ್ರಮಂದಿರ ತೆರೆಯುತ್ತಿದ್ದಂತೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಪಕ್ಕಾ ಫ್ಯಾಮಿಲಿ ಹೀರೋ ಎನಿಸಿಕೊಂಡಿರುವ ರಮೇಶ್‌ ಅವರಿಂದಲೇ ರೀಓಪನ್‌ ಆಗಲಿದೆ!

Advertisement

ಹೀಗೆಂದರೆ ನಿಮಗೆ ಆಶ್ವರ್ಯವಾಗಲಿದೆ. ರಮೇಶ್‌ ಅವರ ಯಾವ ಚಿತ್ರ ಬಿಡುಗಡೆಯಾಗುತ್ತಿದೆ ಎಂದು. ಏಕೆಂದರೆ ರಮೇಶ್‌ ನಟಿಸಿ, ನಿರ್ದೇಶಿಸಿರುವ “100′ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಸೆನ್ಸಾರ್‌ ಬೇರೆ ಆಗಿದೆ. ಹಾಗಾದರೆ ಆ ಚಿತ್ರ ಬಿಡುಗಡೆಯಾಗುತ್ತಾ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಆ ಚಿತ್ರ ಈಗ ಬಿಡುಗಡೆಯಾಗುತ್ತಿಲ್ಲ. ಚಿತ್ರಮಂದಿರಕ್ಕೆ ಜನ ಭಯಬಿಟ್ಟು ಬರುವವರೆಗೆ ಆ ಚಿತ್ರವನ್ನು ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ಈಗ ಬಿಡುಗಡೆಯಾಗುತ್ತಿರುವುದು ರಮೇಶ್‌ ಅವರ”ಶಿವಾಜಿ ಸುರತ್ಕಲ್‌’ ಚಿತ್ರ. ಹೌದು, ಈ ಚಿತ್ರ ಅಕ್ಟೋಬರ್‌15ರಿಂದ ಮರುಬಿಡುಗಡೆಯಾಗುತ್ತಿದೆ.ಈ ಮೂಲಕ ಚಿತ್ರಮಂದಿರ ರೀ ಓಪನ್‌ ಆಗುವ ದಿನವೇ ಈ ಚಿತ್ರ ಪ್ರದರ್ಶನವಾಗಲಿದೆ. ಕೆ.ಆರ್‌.ಜಿ. ಸ್ಟುಡಿಯೋ ಈ ಚಿತ್ರವನ್ನು ಮರುಬಿಡುಗಡೆ ಮಾಡಲು ನಿರ್ಧರಿಸಿದೆ.

ಈ ಚಿತ್ರ ಫೆ.21ರಂದು ತೆರೆಕಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಮೊದಲ ವಾರ ಸುಮಾರು80ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್‌’,2ನೇ ವಾರದಿಂದ ಸುಮಾರು 120 ಕೇಂದ್ರಗಳಲ್ಲಿ ಪ್ರದರ್ಶನವಾಗಿತ್ತು. ಇದೊಂದು ಪತ್ತೇದಾರಿ ಸಿನಿಮಾವಾಗಿದ್ದು, ಕೊಲೆಯೊಂದರ ರಹಸ್ಯದ ಸುತ್ತ ಚಿತ್ರ ಸಾಗುತ್ತದೆ. ಆಕಾಶ್‌ ಶ್ರೀವತ್ಸ ಈ ಚಿತ್ರದ ನಿರ್ದೇಶಕರು. ಈಗ ಈ ಚಿತ್ರದ ಮುಂದುವರೆದ ಭಾಗ ಮಾಡುವ ತಯಾರಿಯಲ್ಲಿದ್ದಾರೆ.

ದಿಯಾಗೂ ಮರು ಬಿಡುಗಡೆ ಭಾಗ್ಯ : ಈ ವರ್ಷಾರಂಭದಲ್ಲಿ ಬಿಡುಗಡೆಯಾಗಿ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ಪಡೆದ ಸಿನಿಮಾ “ದಿಯಾ’. ಆದರೆ ಚಿತ್ರಮಂದಿರಗಳಿಗೆಮಾತ್ರ ಹೆಚ್ಚು ಜನ ಬರಲಿಲ್ಲ ಎಂಬ ಬೇಸರ ಚಿತ್ರತಂಡಕ್ಕಿತ್ತು. ಆದರೆ, ಸೋಶಿಯಲ್‌ ಮೀಡಿಯಾ ಹಾಗೂ ಟಿವಿಯಲ್ಲಿಈಚಿತ್ರ ದೊಡ್ಡಮಟ್ಟದಲ್ಲಿ ಹಿಟ್‌ ಆಗಿತ್ತು. ಈಗ ಈ ಚಿತ್ರ ಕೂಡಾ ಮರು ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ ಆರಂಭದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿಹಾಡು ಇರಲಿಲ್ಲ. ಆದರೆ ಈಗ ಚಿತ್ರಕ್ಕೊಂದು ಹಾಡು ಸೇರಿಸಿಯೇ ರಿಲೀಸ್‌ ಮಾಡಲು ಚಿತ್ರತಂಡ ಯೋಚಿಸಿದೆ. ಚಿತ್ರದಲ್ಲಿ ಪೃಥ್ವಿ ಅಂಬರ್‌ ಹಾಗೂ ಖುಷಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next