Advertisement

ಮೀನುಗಾರರ ನಾಪತ್ತೆ: ಪ್ರಧಾನಿ ಮೋದಿಗೆ ಮನವಿ

04:58 AM Jan 10, 2019 | |

ಮಲ್ಪೆ: ನಾಪತ್ತೆಯಾದ ಮೀನುಗಾರರನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ಉನ್ನತ ಮಟ್ಟದ ತನಿಖೆ ಕೈಗೊಳ್ಳುವಂತೆ ಅಖೀಲ ಭಾರತ ಮೀನುಗಾರರ ವೇದಿಕೆ ಬುಧವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮೀನುಗಾರರು ಸುರಕ್ಷಿತವಾಗಿ ಮರಳಿ ಬರಲು ಎಲ್ಲ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದರು. ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಯೂ ಮನವಿ ಮಾಡಲಾಯಿತು.

Advertisement

ಗುಜರಾತ್‌ ಸಂಸದರಾದ ರಾಜೇಶ್‌ ಬಾಯಿ ಚುಡಸಮ, ಕರಾವಳಿಯ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು, ಶಾಸಕ ಕೆ. ರಘುಪತಿ ಭಟ್‌, ಮೀನುಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಅಖೀಲಭಾರತ ಮೀನುಗಾರರ ವೇದಿಕೆಯ ಅಧ್ಯಕ್ಷ ವೆಲ್ಜಿಬಾಯಿ ಕೆ. ಮಸಾನಿ, ಪ್ರಧಾನ ಕಾರ್ಯದರ್ಶಿ ದಯಾನಂದ ಕೆ. ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಮುಖಂಡರಾದ ಯಶ್‌ಪಾಲ್‌ ಎ. ಸುವರ್ಣ, ನಿತಿನ್‌ ಕುಮಾರ್‌, ಮನೋಹರ ಬೋಳೂರು, ಇಬ್ರಾಹಿಂ, ಕರುಣಾಕರ ಸಾಲ್ಯಾನ್‌, ಕಿಶೋರ್‌ ಸುವರ್ಣ, ಅನಿಲ್‌ ನಿಯೋಗದಲ್ಲಿದ್ದರು.

ಮೀನುಗಾರರ ಪತ್ತೆಗೆ ಉಪಗ್ರಹ ಬಳಕೆ 
ಹೊನ್ನಾವರ: ಮೀನುಗಾರರ ಪತ್ತೆಗೆ ಇಸ್ರೋದ ನೆರವು ಪಡೆದು ಉಪಗ್ರಹ ಮೂಲಕ ಹುಡುಕುವುದಕ್ಕೆ ಯೋಚನೆ ನಡೆಯುತ್ತಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು. ನಾಪತ್ತೆಯಾಗಿರುವ ಕುಮಟಾದ ಇಬ್ಬರು ಮತ್ತು ಹೊನ್ನಾವರ ಅನಂತವಾಡಿ ಬಳಿ ತುಂಬೇಬೀಳುವಿನ ರವಿ ಹರಿಕಂತ್ರ ಅವರ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಪತ್ರಕರ್ತರ ಜತೆ ಅವರು ಮಾತನಾಡಿದರು. ಈ ವಿಷಯದಲ್ಲಿ ಸರಕಾರ ನಿರ್ಲಕ್ಷ್ಯ ತೋರುತ್ತಿಲ್ಲ. ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್‌ ಮೂಲಕವೂ ತನಿಖೆ ನಡೆಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next