Advertisement

ಜಗಳೂರಲ್ಲಿ ಎಸ್‌ಸಿವಿಟಿ ಪರೀಕ್ಷೆ ನಡೆಸಲು ಆಗ್ರಹ

01:35 PM Jul 18, 2017 | Team Udayavani |

ಜಗಳೂರು: ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ನಡೆಸುವ ಎಸ್‌ಸಿವಿಟಿ ಪರೀಕ್ಷೆಯನ್ನು ಜಗಳೂರಿನಲ್ಲಿ ನಡೆಸಬೇಕೆಂದು ಒತ್ತಾಯಿಸಿ ಎಐಎಸ್‌ಎಫ್‌ ನೇತೃತ್ವದಲ್ಲಿ ಇಲ್ಲಿನ ಐಟಿಐ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ಯವರೆಗೆ ಪ್ರತಿ ಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರರಿಗೆ ಲಿಖೀತ ಮನವಿ ಸಲ್ಲಿಸಿದ
ವಿದ್ಯಾರ್ಥಿಗಳು ಐಟಿಐ ನ ಎಸ್‌ಸಿವಿಟಿ ಪರೀಕ್ಷೆಯನ್ನು ಜಗಳೂರಿನಲ್ಲಿ ನಡೆಸಬೇಕು. ಕೂಡಲೇ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕಾಧ್ಯಕ್ಷ ಮಧು ದೇವಿಕೆರೆ ಮಾತನಾಡಿ, ಪ್ರತಿ ವರ್ಷ ನಡೆಯುವ ಎಸ್‌ಸಿವಿಟಿ ಪರೀಕ್ಷೆಯನ್ನು ದಾವಣಗೆರೆಗೆ ಹೋಗಿ ಬರೆಯಬೇಕು. ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬರುವುದರಿಂದ ಎರಡು ತಾಸುಗಳು ಪ್ರಯಾಣ ಮಾಡಬೇಕು. ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅ ಧಿಕಾರಿಗಳು ಗಮನಹರಿಸಿ ಜಗಳೂರಿನಲ್ಲಿ ಪರೀಕ್ಷಾ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಕಳೆದ ಎರಡು ವರ್ಷಗಳ ಮೂರು ವರ್ಷದ ಹಿಂದೆ ಜಗಳೂರಿನಲ್ಲಿ ಐಟಿಐ ಪರೀಕ್ಷಾ ಕೇಂದ್ರವಿತ್ತು. ಆದರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ನಕಲು ಸಂಬಂಧವಾಗಿ ಪರೀಕ್ಷಾ ಕೇಂದ್ರ ರದ್ದಾಗಿದೆ. 
ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪರೀಕ್ಷಾ ಕೇಂದ್ರ ರದ್ದುಪಡಿಸಿರುವುದು ಎಷ್ಟರ ಮಟ್ಟಿಗೆ
ಸರಿ. ಜಗಳೂರಿನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು. ನಕಲು ಮಾಡಲು ಪ್ರೋತ್ಸಾಹಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ತಾಲೂಕಾಧ್ಯಕ್ಷ ಗೌರಿಪುರ ಮೈಲೇಶ್‌, ಎಐಎಸ್‌ಎಫ್‌ ಉಪಾಧ್ಯಕ್ಷ ರವಿಕುಮಾರ ದೊಡ್ಡಬೊಮ್ಮನಹಳ್ಳಿ, ಕಾರ್ಯದರ್ಶಿ ಪವನ್‌, ಸಹಕಾರ್ಯದರ್ಶಿ ಯುವರಾಜ್‌ ಎಚ್‌.ಎಂ ಹೊಳೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next