Advertisement

ನಿಗಮದ ಹೆಸರು ಬದಲಿಸಲು ಮನವಿ

03:15 PM Feb 15, 2022 | Team Udayavani |

ಸಿರವಾರ: ಸವಿತಾ ಸಮಾಜದ ನಿಗಮವನ್ನು ಹಡಪದ-ಸವಿತಾ ಸಮಾಜ ಅಭಿವೃದ್ಧಿ ನಿಗಮ ಎಂದು ತಿದ್ದುಪಡಿ ಮಾಡಿ 50 ಕೋಟಿ ಅನುದಾನ ನೀಡುವಂತೆ ಹಡಪದ ಹಪ್ಪಣ್ಣ ಸೇವಾ ಸಂಘದಿಂದ ಮನವಿ ಸಲ್ಲಿಸಲಾಯಿತು.

Advertisement

12ನೇ ಶತಮಾನದಲ್ಲಿ ಬಸವಣ್ಣನವರ ಆಪ್ರ ಕಾರ್ಯದರ್ಶಿಯಾಗಿ ಕ್ರಾಂತಿಕಾರಿ ಹೋರಾಟದಲ್ಲಿ ಹಡಪದ ಅಪ್ಪಣ್ಣನವರು ಭಾಗಿಯಾಗಿದ್ದರು. ನಮ್ಮ ಸಮಾಜದವರು ರಾಜ್ಯದ 18 ಜಿಲ್ಲೆಗಳಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ನಮ್ಮ ಸಮಾಜ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಸವಿತಾ ಸಮಾಜದ ನಿಗಮವನ್ನು ಹಡಪದ-ಸವಿತಾ ಸಮಾಜ ಅಭಿವೃದ್ಧಿ ನಿಗಮ ಎಂದು ಬದಲಾಯಿಸಿ ಅನುದಾನ ಬಿಡುಗಡೆ ಮಾಡಿ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಬೇಕೆಂದು ಮನವಿ ಸಲ್ಲಿಸಿದರು.

ಬಸವರಾಜ ಚಿಂಚರಕಿ, ಚಂದ್ರಶೇಖರ ಹಡಪದ, ಬಸವರಾಜ ಹರವಿ, ಬಸವರಾಜ ಹೀರಾ, ಅಯ್ಯಪ್ಪ, ಬಸವರಾಜ, ದೇವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next