Advertisement

ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಲು ಮನವಿ

02:56 PM Jan 17, 2021 | Team Udayavani |

ಹಿರಿಯೂರು: ನಾಗರಿಕರು ನಗರ ಸ್ವತ್ಛತೆಗೆ ನಗರಸಭೆ ಸಿಬ್ಬಂದಿಗೆ ಸಹಕಾರನೀಡುವಂತೆ ನಗರಸಭೆ ಅಧ್ಯಕ್ಷೆ ಶಂಶುನ್ನೀಸಾ ಮನವಿ ಮಾಡಿದರು.

Advertisement

ಶನಿವಾರ ನಗರದ ಟಿ.ಬಿ. ವೃತ್ತದ ವಾರ್ಡ ನಂ 2ರ 100 ಅಡಿ ರಸ್ತೆಯ ಬಳಿ ಸ್ವತ್ಛ ಭಾರತ ಕಾರ್ಯಕ್ರಮದಡಿಯಲ್ಲಿ “ನಮ್ಮ ಚಿತ್ತ ಸ್ವತ್ಛತೆಯತ್ತ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತ್ಯಾಜ್ಯ ವಸ್ತುಗಳನ್ನು ನಿಗದಿತ ಸ್ಥಳಗಳಿಗೆ ತಲುಪಿಸುವ ಮೂಲಕ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಅಕ್ಕ ಪಕ್ಕದ ಚರಂಡಿಗಳಲ್ಲಿ ಘನ ತ್ಯಾಜ್ಯ ಹಾಕದೆ ನಗರಸಭೆ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಕುವ ಮೂಲಕ ನಗರಸಭೆ ಸಿಬ್ಬಂದಿಗೆ ಸಹಕಾರ ನೀಡಬೇಕೆಂದರು.

ಇದನ್ನೂ ಓದಿ:ಮಳೆಹಾನಿ: ಸೂಕ್ತ ಪರಿಹಾರಕ್ಕೆ ಒತ್ತಾಯ

ನಗರಸಭೆ ಉಪಾಧ್ಯಕ್ಷ ಬಿ.ಎನ್‌. ಪ್ರಕಾಶ್‌ ಮಾತನಾಡಿ , ನಗರ ಸೌಂದರ್ಯಕ್ಕೆ ನಗರಸಭೆ ಒತ್ತು ನೀಡಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದರು. ಪೌರಾಯುಕ್ತೆ ಟಿ. ಲೀಲಾವತಿ, ನಗರಸಭೆ ಸದಸ್ಯರಾದ ಜಿ.ಎಸ್‌. ತಿಪ್ಪೇಸ್ವಾಮಿ, ಪ್ರಭಾರಿ ಪರಿಸರ ಅಭಿಯಂತರ ಅಂಜನಪ್ಪ , ಆರೋಗ್ಯ ನಿರೀಕ್ಷಕರಾದ ಸುನೀಲ್‌ಕುಮಾರ್‌, ಅಶೋಕ್‌ಕುಮಾರ್‌, ಲೆಕ್ಕಾ ಧಿಕಾರಿ ಮೆಹಬೂಬ್‌ ಅಲಿ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next