Advertisement

ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಸಂಸದೆಗೆ ಮನವಿ

07:39 PM Jun 10, 2019 | Sriram |

ಕಟಪಾಡಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ನೀಡಿ ಸಹಕರಿಸುವಂತೆ ಕೋರಿ ಕ್ಷೇತ್ರಾಡಳಿತ ಮಂಡಳಿಯು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿಯನ್ನು ನೀಡಿತು.

Advertisement

ಕ್ಷೇತ್ರದ ಒಳಾಂಗಣ ಮತ್ತು ಹೊರಾಂಗಣಕ್ಕೆ ತಗಡು ಚಪ್ಪರ ನಿರ್ಮಿಸಲು ಸುಮಾರು 15 ಲಕ್ಷ ಹಾಗೂ 10 ಶೌಚಾಲಯಗಳ ನಿರ್ಮಾಣಕ್ಕೆ ಸುಮಾರು 5 ಲಕ್ಷ ಅನುದಾನವನ್ನು ನೀಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿಯಲ್ಲಿ ಉಲ್ಲೇಖೀಸಲಾಗಿದೆ.

ಈ ಸಂದರ್ಭ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್‌.ಶಂಕರ ಪೂಜಾರಿ, ಗೌ|ಪ್ರ|ಕಾರ್ಯದರ್ಶಿ ಶಿವಾನಂದ ಯು. ಕೋಶಾಧಿಕಾರಿ ವೀರೇಶ್‌ ಸುವರ್ಣ, ಆಡಳಿತ ಮಂಡಳಿಯ ಕಾಮ್‌ರಾಜ್‌ ಸುವರ್ಣ, ಪ್ರಮೋದ್‌ ಸುವರ್ಣ, ಸತೀಶ್‌ ಅಂಬಾಡಿ, ಶಿಲ್ಪಾ ಜಿ.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next