Advertisement

ಮಠಾಧೀಶರ ಧರ್ಮ ಪರಿಷತ್‌ನಿಂದ ಮನವಿ

07:58 AM May 29, 2020 | Suhan S |

ಕೊಟ್ಟೂರು: ಈಚೆಗೆ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಿರ್ವಾಣಿ ನಾಗಠಾಣ ಮಠದ ರುದ್ರಪಶುಪತಿ ಶಿವಾಚಾರ್ಯ ಮಹಾರಾಜ್‌ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮಠಾಧೀಶರ ಧರ್ಮ ಪರಿಷತ್ತು ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ವೀರಶೈವ ಧರ್ಮದ ಶಿವಾಚಾರ್ಯ ಬಳಗದಿಂದ ಸಾವಿರಾರು ಕೈಂಕರ್ಯಗಳು ನಡೆಯುತ್ತ ಬಂದಿದ್ದು, ಇಂತ ಮಠಾಧಿಧೀಶರಾದ ಶಿವಾಚಾರ್ಯರ ಹತ್ಯೆ ಖಂಡನೀಯ. ಆದ್ದರಿಂದ ಕೂಡಲೇ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸೂಕ್ತ ಕಠಿಣ ಕ್ರಮ ಜರುಗಿಸಬೇಕೆಂದು ಹಾಗೂ ಇಂತ ದುಷ್ಕೃತ್ಯ ಮತ್ತೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಶಿವಶಂಕರ ಸ್ವಾಮೀಜಿ, ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸದಸ್ಯ ಅಡಿಕೆ ಮಂಜುನಾಥ, ಕೆ.ಎಂ. ಕೊಟ್ರೇಶ, ಉಮಾಪತಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next