Advertisement

ಸೇವೆಗೆ ಪುನರ್‌ ನೇಮಕ ಮಾಡಿಕೊಳ್ಳಲು ಮನವಿ

10:55 PM Dec 22, 2019 | Team Udayavani |

ಬೆಂಗಳೂರು: ಸೇವೆಗೆ ಮರು ನೇಮಕ ಮಾಡಿಕೊಳ್ಳುವಂತೆ ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಗೊಂಡಿರುವ ಎಸ್‌.ಮೂರ್ತಿಯವರು ಮುಖ್ಯಮಂತ್ರಿ ನೇತೃತ್ವದ ಕರ್ನಾಟಕ ವಿಧಾನಸಭೆ ಸಚಿವಾಲಯದ ವಿಶೇಷ ಮಂಡಳಿಗೆ ಮನವಿ ಮಾಡಿದ್ದಾರೆ. ಅಮಾನತು ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ.

Advertisement

ಆದರೆ, ಇಲಾಖಾ ವಿಚಾರಣೆ ಆರಂಭಿಸದೆ ಮೇಲ್ಮನವಿದಾರರನ್ನು ಸುದೀರ್ಘ‌ ಅವಧಿವರೆಗೆ ಅಮಾನತಿನಲ್ಲಿ ಇಡುವಂತಿಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿರುವುದನ್ನು ಉಲ್ಲೇಖೀಸಿ ಮೂರ್ತಿ ಮನವಿ ಸಲ್ಲಿಸಿದ್ದಾರೆ. ಅವ್ಯವಹಾರ, ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಎಸ್‌.ಮೂರ್ತಿ ಅವರನ್ನು ವಿಧಾಸನಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಳಿಸಿ, 2018ರ ಡಿ.27ರಂದು ಆದೇಶ ಹೊರಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next