Advertisement

ಬಡ್ಡಿ ಸಹಿತ ಸಾಲ ಮನ್ನಾಗೆ ಆಗ್ರಹ

05:35 AM Jun 30, 2020 | Lakshmi GovindaRaj |

ಮಂಡ್ಯ: ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ರಾಷ್ಟ್ರೀಯ-ಸಹಕಾರ ಬ್ಯಾಂಕುಗಳು, ಸಹಕಾರ ಸಂಘಗಳು ಹಾಗೂ ಕಿರು ಸಾಲ ಸಂಸ್ಥೆಗಳೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಪಡೆದಿರುವ ಸಾಲಗಳನ್ನು ಬಡ್ಡಿ ಸಹಿತ ಮನ್ನಾ ಮಾಡುವಂತೆ  ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು, ಕೇಂದ್ರದ ವಿರುದಟಛಿ ಘೋಷಣೆ  ಕೂಗಿದರಲ್ಲದೆ, ಸ್ತ್ರೀಶಕ್ತಿ ಸಂಘಗಳ ಸಾಲ ಮತ್ತು ಬಡ್ಡಿ ಮನ್ನಾ ಮಾಡಲು ಅಗತ್ಯವಾದ ಹಣಕಾಸಿನ ನೆರವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಹಣ ಬಿಡುಗಡೆ ಮಾಡಿ: ಮಹಿಳೆಯರನ್ನು ಸಾಲದ ಕಂತು ಕಟ್ಟುವಂತೆ ಹಿಂಸಿಸುತ್ತಿರುವ ಬ್ಯಾಂಕ್‌ ಮತ್ತು ಮೈಕ್ರೋಫೈನಾನ್ಸ್‌ ಸಂಸ್ಥೆಗಳ ವಿರುದಟಛಿ ಕ್ರಮ ಜರುಗಿಸಬೇಕು. ಸಾಲಗಳ ಮೇಲಿನ ಬಡ್ಡಿಯನ್ನು ಶೇ.75ರಷ್ಟು ಕೇಂದ್ರ ಹಾಗೂ  ಶೇ.25ರಷ್ಟನ್ನು ರಾಜ್ಯಸರ್ಕಾರಗಳು ಭರಿಸಬೇಕು. ಇದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂ ಲವನ್ನು ಕೇಂದ್ರ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಸರ್ಕಾರವು ತಕ್ಷಣವೇ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೂನ್ಯಬಡ್ಡಿ  ದರದಲ್ಲಿ ಹೊಸ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶಿಸುವುದು. ಸ್ವಸಹಾಯ ಸಂಘಗಳ ಮಹಿಳೆಯರಿಗೆ ತರಬೇತಿ, ಕಚ್ಚಾ ಪದಾರ್ಥಗಳು ಹಾಗೂ ಮಾರಾಟದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ  ಸಂಘಟನೆ ರಾಜ್ಯಾಧ್ಯಕ್ಷೆ ದೇವಿ, ಶೋಭಾ, ಸುಶೀಲಾ, ಡಿ.ಕೆ.ಲತಾ, ಚಂದ್ರಮ್ಮ, ಪ್ರೇಮಾ, ಕೆ.ಎಸ್‌.ಸುನೀತಾ, ಪ್ರಭಾ, ಪ್ರೇಮಮ್ಮ, ಮಂಜುಳಾ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next