Advertisement

ಅಕ್ರಮ ಜಾಗ ತೆರವಿಗೆ ಮನವಿ

02:00 PM Apr 15, 2021 | Team Udayavani |

ಚೇಳೂರು: ಚೇಳೂರಿನಲ್ಲಿ ಸರ್ಕಾರಿಗುಂಡು ತೋಪು ಒತ್ತುವರಿ ತೆರವುಗೊಳಿಸಬೇಕು ಎಂದು ರೈತ ನಾಯಕಪ್ರೊ.ನಂಜುಂ ಡ ಸ್ವಾಮಿ ಸ್ಥಾಪಿತ ರಾಜ್ಯ ರೈತಸಂಘದ ಹಸಿರು ಸೇನೆ ತಾಲೂಕು ಸಮಿತಿನೇತೃತ್ವದಲ್ಲಿ ಸಚಿವರಿಗೆ ಮನವಿಸಲ್ಲಿಸಲಾಯಿತು.

Advertisement

ಅಧ್ಯಕ್ಷ ರಾಜ್ಯಾದ್ಯಕ್ಷರಾದ ಜಿ.ಜಿ.ಹಳ್ಳಿಬಿ.ನಾರಾಯಣ ಸ್ವಾಮಿ ಮಾತನಾಡಿ,ಚೇಳೂರು ಗ್ರಾಮದಲ್ಲಿ ಕೆಲವರು ಸರ್ಕಾರಿಭೂಮಿ ಆಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಸುಮಾರು 100 ಕೋಟಿ ರೂ. ಬೆಲೆಬಾಳುವ ಜಾಗಗಳಿದ್ದು, ಈ ಕುರಿತುಡೀಸಿಗೆ ಮನವಿ ನೀಡಿದ್ದರೂ, ಸರ್ವೆಮಾಡಿಲ್ಲ.

ಧರಣಿ ಮಾಡಿದ್ದರೂ ನ್ಯಾಯಸಿಕ್ಕಿಲ್ಲ. ಇಲ್ಲೇ ನೂತನ ತಾಲೂಕಿಗೆ ಮಿನಿವಿಧಾನಸೌಧ ನಿರ್ಮಾಣ ಮಾಡಬಹುದುಎಂದು ಸಚಿವರಿಗೆ ಮನವಿ ಮಾಡಿದ್ದಾರೆ.ಮನವಿ ಸ್ವೀಕರಿಸಿದ ಸಚಿವರು, ಸೂಕ್ತಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಸರ್ಕಾರದ ಗುಂಡುತೋಪು ತೆರವುಗೊಳಿಸಲು ಹೇಳಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಆರ್‌.ಶಿವಾರೆಡ್ಡಿ, ಕಾರ್ಯಾಧ್ಯಕ್ಷ ಕೆ.ಎನ್‌.ಸೋಮಶೇಖರ, ಮ್ಯಾಕಲಪಲ್ಲಿ ನಂಜುಂಡಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next