Advertisement

ಶ್ರೀನಿವಾಸಗೆ ಬೆಂಬಲಿಸಲು ವಕೀಲರಿಗೆ ಮನವಿ

04:02 PM Jun 03, 2018 | Team Udayavani |

ಮಾನ್ವಿ: ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಬಿ. ಶ್ರೀನಿವಾಸ ಅವರ ಪರವಾಗಿ ಮಾನ್ವಿ ತಾಲೂಕು ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ ನೇತೃತ್ವದಲ್ಲಿ ನ್ಯಾಯವಾದಿಗಳು ಮತ್ತು ಪದವೀಧರ
ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದರು.

Advertisement

ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್‌ ಮಾತನಾಡಿ, ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಬಿ. ಶ್ರೀನಿವಾಸ ಅವರು ಶೈಕ್ಷಣಿಕ ಚಿಂತನೆ ಹೊಂದಿದ್ದಾರೆ. ಪದವೀಧರರ ಸಮಸ್ಯೆಗಳ ಪರಿಹರಿಸುವ ಕಾಳಜಿಹೊಂದಿದ್ದಾರೆ. ಜನಪರ ಹೋರಾಟಗಾರರಾದ ಅವರಿಗೆ ಪದವೀಧರ ಮತದಾರರು ಜೂ.8 ರಂದು ನಡೆಯುವ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆಗೊಳಿಸಬೇಕೆಂದು ವಿನಂತಿಸಿದರು.

ಮಾಜಿ ಶಾಸಕ ಗಂಗಾಧರ ನಾಯಕ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ತಿಮ್ಮಾರೆಡ್ಡಿ ಭೋಗಾವತಿ, ಬಿಜೆಪಿ ಮುಖಂಡರಾದ ಶರಣಯ್ಯ ನಾಯಕ ಗುಡದಿನ್ನಿ, ಕೊಟ್ರೇಶಪ್ಪ ಕೋರಿ, ಉಮೇಶ ಸಜ್ಜನ, ಅಯ್ಯಪ್ಪ ನಾಯಕ ಮ್ಯಾಕಲ್‌, ಕೇದಾರನಾಥ, ವಿ.ಜನಾರ್ಧನ, ಗುರುಸಿದ್ದಪ್ಪ, ಕೆ.ವೆಂಕಟೇಶ, ಚಂದ್ರು ಜಾನೇಕಲ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next