Advertisement

ಕರೆನ್ಸಿ ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರ ತೆಗೆದು, ಬೋಸ್‌ ಫೋಟೋ ಹಾಕಿ!

08:04 PM Oct 22, 2022 | Team Udayavani |

ನವದೆಹಲಿ: ಕರೆನ್ಸಿ ನೋಟುಗಳಲ್ಲಿರುವ ಮಹಾತ್ಮ ಗಾಂಧೀಜಿ ಅವರ ಫೋಟೋವನ್ನು ತೆಗೆದುಹಾಕಿ, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಚಿತ್ರವನ್ನು ಹಾಕುವಂತೆ ಅಖೀಲ ಭಾರತ ಹಿಂದೂ ಮಹಾಸಭಾ(ಎಬಿಎಚ್‌ಎಂ) ಒತ್ತಾಯಿಸಿದೆ.

Advertisement

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್‌ ಅವರ ಕೊಡುಗೆಯು ರಾಷ್ಟ್ರಪಿತನಿಗಿಂತ ಏನೂ ಕಡಿಮೆಯಿರಲಿಲ್ಲ. ಹೀಗಾಗಿ, ನೋಟುಗಳಲ್ಲಿನ ಗಾಂಧಿ ಫೋಟೋವನ್ನು ತೆಗೆದುಹಾಕಿ, ಅಲ್ಲಿ ಬೋಸ್‌ ಫೋಟೋ ಮುದ್ರಿಸುವ ಮೂಲಕ ಅವರಿಗೆ ಗೌರವ ನೀಡಬೇಕು ಎಂದು ಎಬಿಎಚ್‌ಎಂ ಆಗ್ರಹಿಸಿದೆ.

ತನ್ನ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಮಹಾತ್ಮ ಗಾಂಧಿಯನ್ನು ಹೋಲುವಂಥ ಮಹಿಷಾಸುರನ ಮೂರ್ತಿಯನ್ನು ಅಳವಡಿಸಿ ವಿವಾದಕ್ಕೆ ನಾಂದಿ ಹಾಡಿದ ಬೆನ್ನಲ್ಲೇ ಹಿಂದೂ ಮಹಾಸಭಾ ಇಂಥದ್ದೊಂದು ಕೋರಿಕೆ ಸಲ್ಲಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ.ಬಂಗಾಳ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಧೀರ್‌ ಚೌಧರಿ, “ಗಾಂಧಿ ಹತ್ಯೆ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಈಗ ಪ್ರತಿದಿನ ಅವರ ಸಿದ್ಧಾಂತ, ಆದರ್ಶಗಳನ್ನು ಕೊಲ್ಲಲಾಗುತ್ತಿದೆ. ಇದಕ್ಕೆ ಬಿಜೆಪಿ, ಆರೆಸ್ಸೆಸ್‌ ಉತ್ತರಿಸಬೇಕು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next