Advertisement

Soon ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರ ದುರಸ್ತಿ: ಒಡಿಶಾ ಸಚಿವ

01:24 AM Jul 29, 2024 | Team Udayavani |

ಭುವನೇಶ್ವರ: ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ದುರಸ್ತಿಯನ್ನು ಶೀಘ್ರವೇ ಆರಂಭಿಸ ಲಾಗು ತ್ತದೆ. ಭಾರತೀಯ ಪುರಾತತ್ವ ಇಲಾಖೆ ಅದನ್ನು ಕೈಗೆತ್ತಿಕೊಳ್ಳಲಿದೆ ಎಂದು ಒಡಿ ಶಾದ ಕಾನೂನು ಸಚಿವ ಪೃಥ್ವಿ ರಾಜ್‌ ಹರಿಚಂದನ್‌ ಹೇಳಿ ದ್ದಾರೆ. ಈಗಾಗಲೇ ಪುರಾತತ್ವ ಇಲಾಖೆ ಅಗತ್ಯ  ಸಮೀಕ್ಷೆ ಕೈಗೊಂಡಿದೆ ಎಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಕಾರ್ಯಯೋಜನೆಯಲ್ಲಿ ಕೊಂಚ ಬದಲಾವಣೆ ಮಾಡಲಾಗುತ್ತದೆ. ನಕಲಿ ಕೀಲಿ ಕೈ ಕಳೆದು ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಬಳಿಕ ನಕಲಿ ಕೀಲಿ ಕೈ ಕಳೆದುಹೋದ ಬಗ್ಗೆ ವಿವಾದ ಸೃಷ್ಟಿಸಿದ್ದು ಯಾರು ಎನ್ನುವುದು ತಿಳಿದು ಬರಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next