Advertisement

ಕೃಷಿಕರಿಗೆ ಉಳುಮೆ ಮಾಡಲು ಬಾಡಿಗೆ ಟ್ರ್ಯಾಕ್ಟರ್‌ ಪೂರೈಕೆ

10:48 PM May 21, 2020 | Sriram |

ಶಿರ್ವ: ಲಾಕ್‌ಡೌನ್‌ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಕೃಷಿಕರಿಗೆ ಉತ್ತೇಜನ ನೀಡುವ ಸಲುವಾಗಿ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ವ್ಯಾಪ್ತಿಯ ಭತ್ತದ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಬಾಡಿಗೆ ಟ್ರ್ಯಾಕ್ಟರ್‌ ಪೂರೈಕೆ ಮಾಡಲು ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್‌ ಶೆಟ್ಟಿ ಅವರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ.

Advertisement

ಸಂಘದ ವ್ಯಾಪ್ತಿಯಲ್ಲಿ ಬರುವ ಶಿರ್ವ, ಕುತ್ಯಾರು, ಕಳತ್ತೂರು ,ಸಾಂತೂರು,ಪಿಲಾರು ಗ್ರಾಮಗಳ ಕೃಷಿಕರಿಗೆ ಕೃಷಿ ಭೂಮಿ ಉಳುಮೆ ಮಾಡಲು ಗಂಟೆಗೆ. 800 ರೂ. ದರದಲ್ಲಿ ಟ್ರ್ಯಾಕ್ಟರನ್ನು ಬಾಡಿಗೆಗೆ ನೀಡಲಾಗುವುದು. ನೇಜಿ ಬಿತ್ತನೆ ಮಾಡುವ ಸಲುವಾಗಿ ಈಗಾಗಲೇ 2 ಟ್ರಾಕ್ಟರ್‌ಗಳನ್ನು ತರಿಸಿಕೊಳ್ಳಲಾಗಿದ್ದು , ಜೂನ್‌ ತಿಂಗಳಲ್ಲಿ ಇನ್ನೂ ಹೆಚ್ಚಿನ ಟ್ರ್ಯಾಕ್ಟರ್‌ ತರಿಸಿಕೊಳ್ಳ ಲಾಗುವುದು.

ಕೃಷಿ ಸಹಕಾರಿ ಸಂಘದ ಮೂಲ ಆಶಯಕ್ಕೆ ಪೂರಕವಾದ ಸೇವೆ ಮಾಡಲು ಯೋಜನೆ ರೂಪಿಸುತ್ತಿದ್ದು , ಬ್ಯಾಂಕಿಂಗ್‌ ವ್ಯವಹಾರದೊಂದಿಗೆ ಕೃಷಿಗೆ ಉತ್ತೇಜನ ನೀಡಲು ಸಂಸ್ಥೆ ಕಾರ್ಯ ಪ್ರವೃತ್ತವಾಗಿದೆ. ಗ್ರಾಮದ ರೈತರು ಸಂಘದ ಶಾಖೆಗಳ ಸಿಬಂದಿಗಳನ್ನು ಸಂಪರ್ಕಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next