Advertisement

ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಪೇಟೆಬೆಟ್ಟು ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ ಸಂಪನ್ನ

04:55 PM Jan 09, 2023 | Team Udayavani |

ಕಟಪಾಡಿ: ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್‌ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಭಗವಾನ್‌ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಸಾವಿರಾರು ಭಕ್ತಾಧಿಗಳ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಶನಿವಾರ ರಾತ್ರಿ ಮತ್ತು ರವಿವಾರ ಜರಗಿತು.

Advertisement

ಆ ಪ್ರಯುಕ್ತ ಧ್ವಜಸ್ತಂಭ ಮುಹೂರ್ತ, ಚಪ್ಪರ ಆರೋಹಣ, ಸುಮಾರು 8 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಮಹಾಅನ್ನಸಂತರ್ಪಣೆ, ಶ್ರೀ ಕ್ಷೇತ್ರ ಶುದ್ಧಿ ಪೂಜೆ, ಭಂಡಾರ ಹೊರಟು ರಾತ್ರಿ ಭಗವಾನ್‌ ಶ್ರೀ ಬಬ್ಬುಸ್ವಾಮಿಯ ನೇಮೋತ್ಸವ ಮತ್ತು ಆದಿಶಕ್ತಿ ಶ್ರೀ ತನ್ನಿಮಾನಿಗ ದೇವಿಯ ನೇಮೋತ್ಸವವು ಹಾಗೂ ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮೋತ್ಸವ ಜರಗಿದ್ದು, ರವಿವಾರ ಸಂಜೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ರಾಜ್ಯ, ಹೊರ ರಾಜ್ಯಗಳ ಸಾವಿರಾರು ಭಕ್ತಾಧಿಗಳ ಪಾಲ್ಗೊಳ್ಳುವಿಕೆಯಿಂದ ಜರಗಿತು.

ಈ ಸಂದರ್ಭ ಪಾಂಗಾಳ ನಾಯಕ್‌ ಮನೆತನ ಕಟಪಾಡಿ, ಹೊಸಮನೆ ಭರತ್‌ ಹೆಗ್ಡೆ, ಗರಡಿ ಮನೆ ಅಶೋಕ್‌ ಎನ್‌. ಪೂಜಾರಿ, ಕೆ. ಪ್ರೇಮ್‌ ಕುಮಾರ್‌, ದೈವಸ್ಥಾನದ ಗುರಿಕಾರ ಹರಿಶ್ಚಂದ್ರ ಪಿಲಾರ್‌, ಪ್ರಮುಖರಾದ ತುಕಾರಾಮ ಎಸ್‌. ಉರ್ವ, ಪ್ರಧಾನ ಅರ್ಚಕ ಜಯಕರ್‌ ವಿ. ಯಶವಂತ್‌ ಕೆ. ರಾಜ್‌ಗೊàಪಾಲ್‌ ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next