Advertisement

ಬಂಜೆಯಾದರೂ ಅಡ್ಡಿಯಿಲ್ಲ,ಸಂಸ್ಕಾರ ಇಲ್ಲದ ಮಕ್ಕಳನ್ನು ಮಾತ್ರ ಹೆರಬೇಡಿ !

11:48 AM Jun 14, 2018 | Team Udayavani |

ಭೂಪಾಲ್‌:‘ಸಂಸ್ಕಾರ ಇಲ್ಲದ ಮಕ್ಕಳನ್ನು ಹೆರುವ ಬದಲು ನೀವು ಬಂಜೆಯಾಗಿಯೇ ಉಳಿದರು ತೊಂದರೆಯಿಲ್ಲ’ ಎಂದು ಮಹಿಳೆಯರಿಗೆ ಸಲಹೆ ನೀಡುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ವಿವಾದಕ್ಕೆ ಗುರಿಯಾಗಿ ಸುದ್ದಿಯಾಗಿದ್ದಾರೆ. 

Advertisement

ಗುನಾ ಕ್ಷೇತ್ರದ ಶಾಸಕ ಪನ್ನಾಲಾಲ್‌ ಶಾಕ್ಯಾ ಸಮಾಜ ಸುಧಾರಣೆಗಾಗಿ ನಡೆದ ಸಮಾರಂಭವೊಂದರಲ್ಲಿ ಈ ಹೇಳಿಕೆ ನೀಡಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ. 

ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸುವ ವೇಳೆ ಸಂಸ್ಕಾರ ಇಲ್ಲದ ಸಮಾಜ ದ್ರೋಹಿಗಳನ್ನು ಹೆರುವ ಬದಲು ಬಂಜೆಯಾಗಿ ಉಳಿಯುವುದು ಒಳಿತಲ್ಲವೇ ಎಂದಿರುವುದಾಗಿ ವರದಿಯಾಗಿದೆ. 

ಗರೀಬಿ ಹಠಾವೋ ಘೋಷವಾಕ್ಯದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು ಆದರೆ ಬಡವರನ್ನೇ ಓಡಿಸಿತು. ಕೆಲ ಮಹಿಳೆಯರು ಇಂತಹ ನಾಯಕರಿಗೆ ಜನ್ಮ ನೀಡಿದ್ದಾರೆ ಎಂದು ಕಿಡಿ ಕಾರಿದರು. 

ಈ ಹಿಂದೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿದೇಶದಲ್ಲಿ ಮದುವೆಯಾದ ಬಗ್ಗೆ ಬಹಿರಂಗವಾಗಿ ಆಕ್ರೋಶ ಹೊರ ಹಾಕಿ ಶಾಕ್ಯಾ ಸುದ್ದಿಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next