Advertisement

ಪ್ರತ್ಯೇಕ ಧರ್ಮ, ಚುನಾವಣಾ ರಣತಂತ್ರ; ನಾಳೆ ಒಕ್ಕಲಿಗರು ಕೇಳ್ತಾರೆ:HDK

04:06 PM Jul 25, 2017 | Sharanya Alva |

ಮೈಸೂರು:ಪ್ರತ್ಯೇಕ ಲಿಂಗಾಯತ ಧರ್ಮ ಪ್ರಚಾರಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಯತ್ನಿಸುತ್ತಿರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಂಗಳವಾರ ವಾಗ್ದಾಳಿ ನಡೆಸಿ, ಇದು ರಾಜ್ಯ ಸರ್ಕಾರದ ಕೀಳುಮಟ್ಟದ ಚಿಂತನೆಯಾಗಿದೆ ಎಂದು ಹೇಳಿದರು.

Advertisement

ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಪ್ರಶ್ನಿಸಿದಾಗ, ಇದು ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರವಾಗಿದೆ. ಧರ್ಮ ಪ್ರಚಾರ ಸಚಿವರ ಕರ್ತವ್ಯ ಅಲ್ಲ. ರಾಜ್ಯದಲ್ಲಿನ ಬರದ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.

ಲಿಂಗಾಯತರಿಗೆ ಪ್ರತ್ಯೇಕ ಧರ್ಮಕ್ಕೆ ಅವಕಾಶ ಕೊಟ್ಟರೆ, ನಾಳೆ ಒಕ್ಕಲಿಗರು ಪ್ರತ್ಯೇಕ ಧರ್ಮಕ್ಕೆ ಮನವಿ ಮಾಡುತ್ತಾರೆ. ಆಗ ಎಲ್ಲ ಧರ್ಮಕ್ಕೂ ಪ್ರತ್ಯೇಕ ಸ್ಥಾನ ಮಾನ ಕೊಡಲಿಕ್ಕೆ ಆಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂಬುದು ಕಾಂಗ್ರೆಸ್ ಪಕ್ಷದ ಚುನಾವಣಾ ರಣತಂತ್ರವಾಗಿದೆ. ಸರ್ಕಾರದ ಈ ನಿರ್ಧಾರ ಇತರೆ ಜಾತಿಗಳಿಗೆ ಪ್ರಚೋದನೆ ನೀಡಿದಂತಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next