Advertisement

ಕಸ ಉತ್ಪತ್ತಿ ಮಾಡುವ ವಸ್ತುಗಳ ಬಳಕೆ ಕಡಿಮೆ ಮಾಡಿ

07:40 AM Aug 12, 2017 | Team Udayavani |

ಶಿರ್ವ: ಉಡುಪಿ ಬಯಲು ಶೌಚ ಮುಕ್ತ ಜಿಲ್ಲೆಯಾಗಿದೆ.ತ್ಯಾಜ್ಯ ಮುಕ್ತ ಜಿಲ್ಲೆಯಾಗಿಸುವ ಸಲುವಾಗಿ ಕಸ ಉತ್ಪತ್ತಿ ಮಾಡುವ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಈ ಕಾರ್ಯ ಪ್ರತಿ ಮನೆಯಿಂದಲೇ ಪ್ರಾರಂಭವಾಗಿ ಪರಿಸರದ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಕೈಜೋಡಿಸಿ ಸಾರ್ವಜನಿಕರಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಜಾಗೃತಿ ಮೂಡಿಸಿ ಉಡುಪಿ ತ್ಯಾಜ್ಯ ಮುಕ್ತ ಜಿಲ್ಲೆಯಾಗಲು ಪ್ರಯತ್ನಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement

ಅವರು ಶುಕ್ರವಾರ ಸಂತ ಮೇರಿ ಕಾಲೇಜಿನ ಸಭಾಂಗಣದಲ್ಲಿ ಲಯನ್ಸ್‌ ಕ್ಲಬ್‌ ಶಿರ್ವ, ಗ್ರಾ.ಪಂ. ಶಿರ್ವ ಮತ್ತು ಸಂತ ಮೇರಿ ಕಾಲೇಜು, ಶಿರ್ವ ಇವರ ಆಶ್ರಯದಲ್ಲಿ ನಡೆದ ಘನ ಮತ್ತು ದ್ರವ ಸಂಪನ್ಮೂಲ (ತ್ಯಾಜ್ಯ) ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಉತ್ಪತ್ತಿಯಾಗುವ ಬೇಡದ ವಸ್ತುಗಳನ್ನು ವಿಂಗಡಿಸಿ ಹಸಿ ತ್ಯಾಜ್ಯಗಳನ್ನು ದನಗಳಿಗೆ ನೀಡಿ ಕೊಳೆಯುವ ವಸ್ತುಗಳನ್ನು ಸಾವಯವ ಗೊಬ್ಬರ ತಯಾರಿಸಲು ಬಳಕೆ ಮಾಡಬೇಕು. ಪ್ಲಾಸ್ಟಿಕ್‌ ಇನ್ನಿತರ ವಸ್ತುಗಳ ಬಳಕೆಯನ್ನು ಮಿತಿಗೊಳಿಸಿ ಮರುಬಳಕೆ ಮಾಡುವ ವಸ್ತುಗಳನ್ನು ಬಳಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕ ರೆ|ಫಾ| ಸ್ಟಾನಿ ತಾವೋÅ ಮಾತನಾಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಶಿರ್ವ ಪರಿಸರದ ವಿದ್ಯಾರ್ಥಿಗಳು, ಸಾರ್ವಜನಿಜಕರು, ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿಗಳ ತ್ಯಾಜ್ಯಮುಕ್ತ ಉಡುಪಿ ಜಿಲ್ಲೆಯನ್ನಾಗಿಸುವ ಪರಿಕಲ್ಪನೆಗೆ ಕೈಜೋಡಿಸಬೇಕು ಎಂದು ಹೇಳಿದರು.

ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್‌ ಡಿ’ಸೋಜಾ, ತಾ.ಪಂ.ಸದಸ್ಯೆ ಗೀತಾ ವಾಗೆÛ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಪದ್ಮನಾಭ ಭಟ್‌,ಶಿರ್ವ ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಮೆಲ್ವಿನ್‌ ಅರಾನ್ಹ, ಕೋಶಾಧಿಕಾರಿ ಸೇrನಿ ಡಿಸೋಜಾ,ನೋಡಲ್‌ ಅಧಿಕಾರಿ ಶ್ರೀನಿವಾಸ ರಾವ್‌, ಪಿಡಿಒ ಮಾಲತಿ, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್‌ ಶೆಣೈ, ಗೀÅನ್‌ ವಿಮೆನ್‌ ಫೋರಂನ ಸಂಗೀತಾ ಪೂಜಾರಿ ವೇದಿಕೆಯಲ್ಲಿದ್ದರು.

Advertisement

ಕಾರ್ಯಕ್ರಮದಲ್ಲಿ ಶಿರ್ವ ಗ್ರಾ.ಪಂ.ಸದಸ್ಯರು,ಲಯನ್ಸ್‌ ಸದಸ್ಯರು , ಕಾಲೇಜಿನ ಉಪನ್ಯಾಸಕ ವೃಂದ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಶಿರ್ವ ಜಿ.ಪಂ.ಸದಸ್ಯ ವಿಲ್ಸನ್‌ ರೊಡ್ರಿಗಸ್‌ ಪ್ರಾಸ್ತಾವಿಕವಾಗಿ ಮಾಸತನಾಡಿದರು. ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಜೂಲಿಯಾನ್‌ ರೊಡ್ರಿಗಸ್‌ ಸ್ವಾಗತಿಸಿದರು.ಉಪನ್ಯಾಸಕಿ ಪ್ರೊ| ರೆಬೆಕಾ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ಗೋಪಾಲಕೃಷ್ಣ ಸಾಮಗ ವಂದಿಸಿದರು.

ಶಿರ್ವ ಪರಿಸರದಲ್ಲಿ ತ್ಯಾಜ್ಯದೊಂದಿಗೆ ಬೀದಿನಾಯಿಗಳ ಕಾಟ ಬಹುದೊಡ್ಡ ಸಮಸ್ಯೆಯಾಗಿದ್ದು ಭೇಟಿಯ ವೇಳೆ ವೀಕ್ಷಿಸಿದೇªನೆ. ಬಂಗ್ಲೆಗುಡ್ಡೆ ಪ್ರದೇಶದ ಪಶುವೈದ್ಯ ಆಸ್ಪತ್ರೆಯ ಬಳಿ ಬೇಲಿ ಹಾಕಿ ಶೆಡ್‌ ನಿರ್ಮಿಸಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಆಶ್ರಯ ನೀಡಬೇಕು. ಗ್ರಾ.ಪಂ.ಮನೆ , ಹೊಟೇಲ್‌,ಕೋಳಿ, ಮಾಂಸದಂಗಡಿಗಳಿಂದ ಸಂಗ್ರಹಿಸಿದ ಮಾಂಸ ತ್ಯಾಜ್ಯಗಳನ್ನು ನಾಯಿಗಳಿಗೆ ಹಾಕಿದಾಗ ಆಹಾರವೂ ಆಗುತ್ತದೆ,ತ್ಯಾಜ್ಯ ವಿಲೇವಾರಿಯೂ ಆಗುತ್ತದೆ. ಗ್ರಾ.ಪಂ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತೀ ವಾರ್ಡ್‌ಗೆ ತ್ರಿಚಕ್ರ ವಾಹನ ಒದಗಿಸಿ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಸೂಕ್ತ ತರಬೇತಿ ನೀಡಿ ಪ್ರತಿ 12 ಗಂಟೆಗಳಿಗೊಮ್ಮೆ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬಹುದು. ಈ ಬಗ್ಗೆ ಗ್ರಾ.ಪಂ.ಗೆ ಸೂಚಿಸಿದ್ದೇನೆ ಗ್ರಾ.ಪಂ.ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕಿದೆ.
-ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

ಉದಯವಾಣಿ ಸಚಿತ್ರ ವರದಿ
ಶಿರ್ವ ಪರಿಸರದ ಕಸ ತ್ಯಾಜ್ಯ ವಿಲೇ ಸಮಸ್ಯೆ,ಮಟ್ಟಾರು ಡಂಪಿಂಗ್‌ ಯಾರ್ಡ್‌, ಬೀದಿ ನಾಯಿಗಳ ಸಮಸ್ಯೆ ಮತ್ತು ಪಾಳು ಬಿದ್ದ ಕಟ್ಟಡದ ಬಗ್ಗೆ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾದಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
 

Advertisement

Udayavani is now on Telegram. Click here to join our channel and stay updated with the latest news.

Next