Advertisement

ಹ್ಯಾಕರ್‌ಗಳು ದೋಚಿದ್ದ ಹಣ ಮರಳಿ ಖಾತೆಗೆ

07:15 AM Oct 13, 2017 | Team Udayavani |

ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಅವರ ಎಟಿಎಂ ಕಾರ್ಡ್‌ ದುರುಪಯೋಗಪಡಿಸಿಕೊಂಡ ಹ್ಯಾಕರ್‌ಗಳು ದೋಚಿದ್ದ ಲಕ್ಷಾಂತರ ರೂ.ಗಳನ್ನು ಕರ್ನಾಟಕ ಬ್ಯಾಂಕ್‌ ಜೋಶಿ ಅವರ ಖಾತೆಗೆ ಹಣ ಜಮಾ ಮಾಡಿದೆ.

Advertisement

ಕಳೆದ ತಿಂಗಳು ಡಾ| ಭೀಮೇಶ್ವರ ಜೋಶಿ ಯೂರೋಪ್‌ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ಶಾಪಿಂಗ್‌ ಮಾಡಿ ತಮ್ಮ ಎಟಿಎಂ ಕಾರ್ಡ್‌ ಬಳಸಿದ್ದರು. ಆ ನಂತರ ಹಲವು ಬಾರಿ ಅವರ ಮೊಬೈಲ್‌ಗೆ ಖಾತೆಯಿಂದ ಹಣ ತೆಗೆದಿರುವ ಸಂದೇಶ ಬಂದಿತ್ತು. ಹ್ಯಾಕರ್‌ಗಳು ಒಟ್ಟು 20,89,558 ರೂ.ಗಳನ್ನು ಜೋಶಿ ಖಾತೆಯಿಂದ ಲಪಟಾಯಿಸಿದ್ದರು.

ಈ ಕುರಿತು ಜೋಶಿ ಸೆ.15 ರಂದು ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆ ನಂತರ ಖಾತೆಯ ವಿಮಾ ಮತ್ತು ಆರ್‌ಬಿಐನ ರೆಗ್ಯುಲೇಷನ್‌ ಆಕ್ಟ್ ಹಾಗೂ ಬೋರ್ಡ್‌ ಆಫ್‌ ಡೈರೆಕ್ಟರ್‌ ಸಭೆಯಲ್ಲಿ ಜೋಶಿ ಖಾತೆಗೆ ಹಣ ಜಮಾ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ಅನ್ವಯ ಅ.11ರಂದು ಕರ್ನಾಟಕ ಬ್ಯಾಂಕ್‌ ಜೋಶಿ ಅವರ ಖಾತೆಗೆ 20,89,558 ರೂ. ಜಮಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next