Advertisement

ಸಿಎಂ ವಿರುದ್ಧ ದಾಖಲೆ ಕೊಡಿ: ಪರಂ

07:05 AM Aug 19, 2017 | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿನೋಟಿಫೀಕೇಶನ್‌ ಮಾಡಿರುವ ದಾಖಲೆ ಇದ್ದರೆ ಬಿಜೆಪಿಯವರು ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಸವಾಲು ಹಾಕಿದ್ದಾರೆ. ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯವರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ದಾಖಲೆ ಗಳಿದ್ದರೆ ನೀಡಲಿ, ರಾಜ್ಯ ಸರ್ಕಾರ ಅದಕ್ಕೆ ಉತ್ತರ ನೀಡುತ್ತದೆ ಎಂದು ಹೇಳಿದರು.

Advertisement

ರಾಜ್ಯ ಬಿಜೆಪಿ ನಾಯಕರು ಇದುವರೆಗೂ ಸುಮ್ಮನಿದ್ದು, ಈಗ ಅಮಿತ್‌ ಶಾ ಕ್ಲಾಸ್‌ ತೆಗೆದುಕೊಂಡ ಮೇಲೆ ರಾಜ್ಯ ಸರ್ಕಾರದ
ಭ್ರಷ್ಟಾಚಾರ ಕಾಣುತ್ತಿದೆಯಾ ಎಂದು ಪ್ರಶ್ನಿಸಿದರು. ಪ್ರತಿಭಟನೆಗೆ ಪ್ರತೀಕಾರವಾಗಿ ಯಡಿಯೂರಪ್ಪ ವಿರುದ್ಧ ಎಫ್ಐಆರ್‌
ಹಾಕಿದ್ದಲ್ಲ. ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಅವರ ವಿರುದ್ಧ  ಎಫ್ಐಆರ್‌ ಆಗಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next