Advertisement

‘ಕ್ರೀಡಾ ಕ್ಷೇತ್ರದ ಸಾಧನೆ ಗುರುತಿಸುವಂತಾಗಲಿ’

12:39 PM Dec 14, 2017 | Team Udayavani |

ತೋಕೂರು: ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯು ಗುರುತಿಸುವಂತಾಗಬೇಕು, ಉತ್ತಮ ದೈಹಿಕ ಕ್ಷಮತೆಯು ನಮ್ಮ ಕ್ರೀಡಾ ಚಟುವಟಿಕೆಗೆ ಪೂರಕ. ಮಕ್ಕಳನ್ನು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಅವರ ಮನೋಧೈರ್ಯ ವೃದ್ಧಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಟೇಬಲ್‌ ಟೆನ್ನಿಸ್‌ ಅಸೋಸಿಯೇಶನ್‌ನ ಕೋಶಾಧಿಕಾರಿ ಪಿ.ಸಿ. ಚಾಕೋ ಹೇಳಿದರು.

Advertisement

ಹಳೆಯಂಗಡಿ ಬಳಿಯ ತೋಕೂರು ಟಾರ್ಪೊಡೆಸ್‌ ನ್ಪೋರ್ಟ್ಸ್ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಡ್ಮಿಂಟನ್‌ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು.

ಸಜನಿ ಚಾಕೋ, ಮುಖ್ಯ ತೀರ್ಪುಗಾರ ವಿವೇಕ್‌ ಹಾಗೂ ಸಂತೋಷ್‌ ಉಪಸ್ಥಿತರಿದ್ದರು. ಟಾರ್ಪೋಡೇಸ್‌ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್‌ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

ಫಲಿತಾಂಶ:
ಬಾಲಕರು (ಸಬ್‌ಜೂನಿಯರ್‌): ಡೆಂಜಿಲ್‌ (ಪ್ರ), ಇಶಾನ್‌ (ದ್ವಿ), ಅಮೇಯಾ (ತೃ). ಪ್ರಾಥಮಿಕ ವಿಭಾಗ: ಸಾತ್ವಿಕ್‌ ಶೆಟ್ಟಿ (ಪ್ರ), ಸುಮೀತ್‌ (ದ್ವಿ), ಸ್ವಸ್ತಿಕ್‌ (ತೃ). ಬಾಲಕಿಯರ ವಿಭಾಗ: ಅತಿಜಾ (ಪ್ರ), ವೀಕ್ಷಿತಾ (ದ್ವಿ), ನೀರಲ್‌ (ತ). ಬಾಲಕರ ಜೂನಿಯರ್‌ ವಿಭಾಗ : ಶಶಾಂಕ್‌ (ಪ್ರ), ಅನಿರುದ್ಧ್ (ದ್ವಿ), ಸಾತ್ವಿಕ್‌ ಶೆಟ್ಟಿ (ತೃ). ಪ್ರೌಢಶಾಲಾ ವಿಭಾಗ: ಸಾತ್ವಿಕ್‌ ಶೆಟ್ಟಿ (ಪ್ರ), ಶಶಾಂಕ್‌ (ದ್ವಿ), ಶೌನ್‌ (ತೃ). ಮಹಿಳಾ ವಿಭಾಗ: ಸ್ಮಿತಾ (ಪ್ರ), ಮೇಘನಾ (ದ್ವಿ), ವಿಮಲಾ (ತೃ) ಬಹುಮಾನವನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next