Advertisement

ಅಂತಾರಾಜ್ಯ ಪ್ರತಿಭಾನ್ವಿತರಿಗೂ ಪುರಸ್ಕಾರ

03:14 PM Dec 11, 2017 | |

ಬಳ್ಳಾರಿ: ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು,
ಮಹಾಸಭಾದ ವತಿಯಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡಲು ಆರಂಭಿಸಿದ್ದೇವೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸಾದ್‌ ಹೇಳಿದರು.

Advertisement

ನಗರದ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಭಾನುವಾರ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಹಾನಗಲ್‌ ಕುಮಾರ ಸ್ವಾಮೀಜಿಯವರ 150ನೇ ಪುಣ್ಯಸ್ಮರಣೆ ಹಾಗೂ 2016-17ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ವೀವಿ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು. ಈ ದಿನ ವೀರಶೈವ ಸಮುದಾಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡುತ್ತಿದೆ. ಸಮಾಜದ ಋಣವನ್ನು ತೀರಿಸುವ ಮನೋಭಾವವನ್ನು ಸಮುದಾಯದ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಜೊತೆಗೆ, ಸಮಾಜಕ್ಕೆ ಪ್ರತಿಭೆಯಿಂದ ಸುಸಂಸ್ಕೃತ ಸಮಾಜ ಎಂಬ ಹೆಸರನ್ನು ತರಬೇಕು ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ ಮಾತನಾಡಿ, ಶತಮಾನದ ಕೆಳಗೆ ವೀರಶೈವ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿತ್ತು. ಈ ಸಂದರ್ಭ ಹಾನಗಲ್‌ ಕುಮಾರ ಮಹಾಸ್ವಾಮಿಗಳು ಸಮುದಾಯದ ಸಿರಿವಂತರನ್ನು ಹಿಡಿದು ವೀರಶೈವ ವಿದ್ಯಾವರ್ಧಕ ಸಂಘ ಪ್ರಾರಂಭಿಸಲು ಕಾರಣೀಭೂತರಾದರು ಎಂದು ಹೇಳಿದರು. 

ಮಹಾಸ್ವಾಮಿಗಳು ವೀರಶೈವರ ಜೊತೆಗೆ ಸಮಾಜದ ಇತರೆ ವರ್ಗಗಳ ಹೊಸ ಪೀಳಿಗೆಯನ್ನೂ ಶಿಕ್ಷಣವಂತರನ್ನಾಗಿಸಿದರು.
ಅವರ ಋಣ ನಮ್ಮೆಲ್ಲರ ಮೇಲಿದೆ. ಅವರನ್ನು ಸ್ಮರಿಸುವ ಮೂಲಕ ಸಮುದಾಯಕ್ಕೆ ಒಳ್ಳೆಯ ಹೆಸರನ್ನು ತರುವ ಮೂಲಕ ಸಮಾಜದ ಒಳಿತಿಗೆ ಮುಂದಾಗೋಣ ಎಂದು ಅವರು ಹೇಳಿದರು. ವೀರಶೈವ-ಲಿಂಗಾಯಿತ ಒಂದೇ ಆಗಿದ್ದು, ರಾಜಕೀಯ ಕಾರಣಗಳಿಗಾಗಿ ಸಮುದಾಯ ಒಡೆದು ಹೋಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಲಿಂಗ ಪೂಜೆ ಮಾಡುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ¨ªೇವೆ ಎನ್ನುವ ಅಹಂಕಾರ ಮತ್ತು ಕಡಿಮೆ ಅಂಕಗಳಿಸಿದ ಮಕ್ಕಳನ್ನು ಕೀಳರಿಮೆಯಿಂದ ಕಾಣದೇ ಎಲ್ಲರೊಂದಿಗೆ ಪ್ರೀತಿ ವಿಶ್ವಾಸವನ್ನು ಬೆಳಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ತಂದೆ, ತಾಯಿ, ಗುರು ಹಾಗೂ ಶಾಲೆಯನ್ನು ಮಕ್ಕಳು ಎಂದಿಗೂ ಮರೆಯಬಾರದು. ಸಮಾಜದ ಸಹಕಾರ, ಸಹಾಯ ಪಡೆದ ಮಕ್ಕಳು ಉನ್ನತ ಸ್ಥಾನ ಗಳಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು. ಹಾನಗಲ್‌ ಕುಮಾರ ಸ್ವಾಮೀಜಿಯ 150ನೇ ಪುಣ್ಯಸ್ಮರಣೆ ನಿಮಿತ್ತ ಭಾವಚಿತ್ರಕ್ಕೆ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಡಾ| ಸಂಗನಬಸವ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಆಶೀರ್ವಚನ ನೀಡಿದರು.  ಆನಂತರ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಹಾಗೂ ಅಧಿಕ ಅಂಕ ಗಳಿಸಿದ ಬಳ್ಳಾರಿ ಜಿಲ್ಲೆಗೆ ಸೇರಿದ ಸಮುದಾಯದ 300 ವಿದ್ಯಾರ್ಥಿಗಳಿಗೆ ಲಿಂಗದ ಕಾಯಿ ಹಾಗೂ ನಗದು ರೂಪದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜೊತೆಗೆ ವೀವಿ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸನ್ಮಾನಿಸಲಾಯಿತು.

Advertisement

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಂಧ್ರಪ್ರದೇಶದ ಮಹಾಸಭಾದ ರಾಜ್ಯಾಧ್ಯಕ್ಷ ಕೆ. ರಾಮಚಂದ್ರ ರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ, ವೀವಿ ಸಂಘದ ಅಧ್ಯಕ್ಷ ಉಡೇದ ಬಸವರಾಜ, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರ ಸ್ವಾಮಿ, ವೀರಶೈವ ಸಮುದಾಯದ ಮುಖಂಡರಾದ ಹಿರಿಯ ವಕೀಲ ಬಿ.ವಿ. ಬಸವರಾಜ, ಡಾ| ಎಸ್‌.ಜೆ.ವಿ. ಮಹಿಪಾಲ್‌, ಅರವಿ ಬಸನವಗೌಡ, ಜಾನೇಕುಂಟೆ ಬಸವರಾಜ,  ಡಾ| ಸೋಮೇಶ್ವರ ಗಡ್ಡಿ, ಅಂಗಡಿ ಶಶಿಕಲಾ, ಎಂ. ಶರಣ ಬಸವನಗೌಡ, ಎಚ್‌. ಮಹಾರುದ್ರ ಗೌಡ, ಕೆ.ವಿ. ಬಸವರಾಜ, ಆರ್‌.ಪಿ. ಪ್ರಕಾಶ, ಗೋನಾಳ್‌ ವಿರೂಪಾಕ್ಷ ಗೌಡ, ಅಟವಾಳಿ ಕೊಟ್ರೇಶ, ಚನ್ನಬಸವನ ಗೌಡ, ಚಂದ್ರಶೇಖರ ಗೌಡ, ಷಡಕ್ಷರಯ್ಯ ಸ್ವಾಮಿ, ವಿಜಯಕುಮಾರ ಗೌಡ, ಮಲ್ಲನ ಗೌಡ, ಹತ್ತಿ ಶರಣಬಸಪ್ಪ, ಕಾಮರೆಡ್ಡಿ ಚಂದ್ರಶೇಖರ, ಪಲ್ಲೇದ ಜಗದೀಶ, ಬಿ.ಪ್ರಭುವನ ಗೌಡ, ಎಚ್‌. ಎಂ.ಕೊಟ್ರಯ್ಯ, ಎಲ್‌.ನಾಗರಾಜ, ಸಿ.ಕೆ.
ಎಂ. ಬಸವಲಿಂಗಯ್ಯ ಸ್ವಾಮಿ, ಎಂ. ಶಿವಶಂಕರ ಗೌಡ, ಎಂ.ವಿಶ್ವನಾಥ ಗೌಡ, ಜವಳಿ ವೀರೇಶ, ಶ್ರೀಕಾಂತ, ಬಿ. ರವಿಗೌಡ
ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next