Advertisement

ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ

12:15 AM Apr 08, 2019 | Lakshmi GovindaRaju |

ಬೆಂಗಳೂರು: ಯುಗಾದಿ ಹಬ್ಬದ ದಿನ ಇಸ್ಪೀಟ್‌ ಆಟದಲ್ಲಿ ನಡೆದ ಜಗಳ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೆರೆಹಳ್ಳಿಯ ಮೂಕಾಂಬಿಕ ನಗರದ ನಿವಾಸಿ ರಮೇಶ್‌ (38) ಕೊಲೆಯಾದವರು.

Advertisement

ಭಾನುವಾರ ಬೆಳಗ್ಗೆ ರಾಜರಾಜೇಶ್ವರಿನಗರದ ಕೃಷ್ಣಪ್ಪ ಲೇಔಟ್‌ನ ರಸ್ತೆಬದಿ ಮೃತದೇಹ ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೃತದೇಹ ಪರಿಶೀಲನೆ ನಡೆಸಿದಾಗ ಕೊಲೆಯಾದ ವ್ಯಕ್ತಿ ರಮೇಶ್‌ ಎಂಬುದು ಗೊತ್ತಾಗಿದೆ.

ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿದ್ದ ರಮೇಶ್‌, ವಾಪಾಸ್‌ ಬಂದಿರಲಿಲ್ಲ. ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ರಮೇಶ್‌, ಶನಿವಾರ ಮಧ್ಯಾಹ್ನ ಸ್ನೇಹಿತರ ಜತೆ ಇಸ್ಪೀಟ್‌ ಆಡುವಾಗ ಹಣಕಾಸಿನ ವಿಚಾರಕ್ಕೆ ಜಗಳವಾಗಿತ್ತು.

ಈ ಸಂಬಂಧ ಸ್ನೇಹಿತರಿಬ್ಬರ ಜತೆ ಮಾತನಾಡಲು ಸಂಜೆ ಮನೆಯಿಂದ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ತಲೆಗೆ ಹೊಡೆದು ಕೊಲೆಮಾಡಿ, ಮೃತದೇಹ ಎಸೆದು ಹೋಗಿದ್ದಾರೆ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

“ಪತಿ ರಮೇಶ್‌ ಮನೆಗೆ ವಾಪಸ್‌ ಬಾರದಿದ್ದಾಗ ಪುತ್ರ ರಿತೇಶ್‌, ಹಲವು ಕಡೆ ಹುಡುಕಾಟ ನಡೆಸಿ, ಪರಿಚಿತರ ಬಳಿ ವಿಚಾರಿಸಿದ. ಎಲ್ಲೂ ಸುಳಿವು ಸಿಗದ ಕಾರಣ ಗಿರಿನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲು ನಿರ್ಧರಿಸಿದ್ದೆವು. ಅಷ್ಟರಲ್ಲಿ ಅವರು ಕೊಲೆಯಾಗಿರುವ ಸುದ್ದಿ ಗೊತ್ತಾಯಿತು’ ಎಂದು ರಮೇಶ್‌ ಪತ್ನಿ ಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

Advertisement

ಘಟನೆ ಸಂಬಂಧ ಮೃತ ರಮೇಶ್‌ ಪತ್ನಿ, ಸಂಬಂಧಿಕರು, ಆತನ ಸ್ನೇಹಿತರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಮೃತದೇಹ ಪತ್ತೆಯಾಗಿದ್ದ ಸ್ಥಳದ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿ ಕ್ಯಾಮೆರಾ ಫ‌ೂಟೇಜ್‌ ಪರಿಶೀಲಿಸಿದ್ದು, ಕೊಲೆ ಆರೋಪಿಗಳ ಸುಳಿವು ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next