Advertisement

Lok Sabha Election; ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಸಿದ್ಧ: ಜನಾರ್ದನ ರೆಡ್ಡಿ

12:32 AM Jan 30, 2024 | Team Udayavani |

ಮದ್ದೂರು(ಮಂಡ್ಯ): ಮೂರನೇ ಅವಧಿಗೆ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ನಾಯಕತ್ವದ ಸರಕಾರವನ್ನು ದೇಶದ ಜನ ನಿರೀಕ್ಷಿಸುತ್ತಿದ್ದು, ತಮ್ಮ ನೇತೃತ್ವದ ಕಲ್ಯಾಣ ರಾಜ್ಯ ಪಕ್ಷವು ಲೋಕಸಭಾ ಚುನಾವಣೆ ವೇಳೆ ಮೈತ್ರಿಗೆ ಆಸಕ್ತಿ ಹೊಂದಿರುವುದಾಗಿ ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.

Advertisement

ನಗರದ ಶ್ರೀನರಸಿಂಹಸ್ವಾಮಿ ದೇಗುಲದಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷ ಬಿಜೆಪಿಯೊಡನೆ ಚುನಾವಣೆ ಹೊಂದಾಣಿಕೆಗೆ ಸಿದ್ಧವಿದ್ದು, 5 ಕ್ಷೇತ್ರ ಗಳ ನಿರೀಕ್ಷೆಯೊಡನೆ ಮಾತುಕತೆಗೆ ಸಿದ್ಧರಿದ್ದೇವೆ. ತಪ್ಪಿದಲ್ಲಿ ಐದು ಜಿಲ್ಲೆಗಳಲ್ಲಿ ಕಲ್ಯಾಣ ರಾಜ್ಯ ಪಕ್ಷದಿಂದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದರು.

ಬಾಗಲಕೋಟೆ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇಚ್ಛೆ ಹೊಂದಿದ್ದು, ಇದು ಮುಂದಿನ ಮಾತುಕತೆಯ ಫ‌ಲಶ್ರುತಿ ಮೇಲೆ ನಿಂತಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next