Advertisement
ವಿರಾಟ್ ಕೊಹ್ಲಿ ಬಳಗ ಬೆಂಗಳೂರಿನಿಂದ ಗುರುವಾರ ಚೆನ್ನೈಗೆ ಪ್ರಯಾಣಿಸಿತು. ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ತಾವೇರಿದ್ದ ಬಸ್ಸಿನೊಳಗೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಕಪ್ತಾನ ಕೊಹ್ಲಿ ಇನ್ಸಾಗ್ರಾಮ್ನಲ್ಲಿ ಪ್ರಕಟಿಸಿ “ಆಫ್ ಟು ಚೆನ್ನೈ’ ಎಂದು ಬರೆದುಕೊಂಡಿದ್ದಾರೆ.
Related Articles
Advertisement
ಹನ್ನೆರಡನೇ ಐಪಿಎಲ್ ಕೂಟದ ಆರಂಭಿಕ ಪಂದ್ಯದ ಟಿಕೆಟ್ ಮೊತ್ತವನ್ನು ಪುಲ್ವಾಮ ದುರಂತದಲ್ಲಿ ಮಡಿದ ಯೋಧರ ಕುಟುಂಬಕ್ಕೆ ನೀಡಲು ಚೆನ್ನೈ ಸೂಪರ್ ಕಿಂಗ್ಸ್ ನಿರ್ಧರಿಸಿದೆ. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇದರ ಚೆಕ್ ಹಸ್ತಾಂತರಿಸಲಿದ್ದಾರೆ ಎಂದು ತಂಡದ ಪ್ರಕಟನೆ ತಿಳಿಸಿದೆ.
ಶನಿವಾರ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ 12ನೇ ಐಪಿಎಲ್ ಕೂಟ ಆರಂಭವಾಗ ಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳು ಮುಖಾಮುಖೀ ಯಾಗಲಿವೆ. ಪಂದ್ಯದ ಟಿಕೆಟ್ ಮೊದಲ ದಿನವೇ “ಸೋಲ್ಡ್ ಔಟ್’ ಆಗಿದೆ. “ಈ ಬಾರಿಯ ಉದ್ಘಾಟನಾ ಪಂದ್ಯವೆಂದರೆ ಅದು ಚೆನ್ನೈ ಪಾಲಿನ ಮೊದಲ ತವರು ಪಂದ್ಯವೂ ಆಗಿದೆ.