Advertisement

IPL 2024; ನಾನು ಗಂಭೀರ್- ನವೀನ್ ರನ್ನು ತಬ್ಬಿಕೊಂಡಿದ್ದು ಹಲವರಿಗೆ ಬೇಸರ ತಂದಿದೆ: ವಿರಾಟ್

03:50 PM Apr 11, 2024 | Team Udayavani |

ಮುಂಬೈ: ಕಳೆದ ಸೀಸನ್ ನ ಐಪಿಎಲ್ ನಲ್ಲಿ ಜಗಳವಾಡಿಕೊಂಡಿದ್ದ ನವೀನ್ ಉಲ್ ಹಕ್ ಮತ್ತು ಗೌತಮ್ ಗಂಭೀರ್ ಅವರನ್ನು ಈ ಬಾರಿ ನಾನು ಅಪ್ಪಿಕೊಂಡಿದ್ದು ಹಲವರಿಗೆ ಬೇಸರ ತರಿಸಿದೆ ಎಂದು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಹೇಳಿದರು.

Advertisement

ಕಳೆದ ವರ್ಷದ ಐಪಿಎಲ್ ನಲ್ಲಿ ಗೌತಮ್ ಗಂಭೀರ್ ಅವರು ಲಕ್ನೋ ತಂಡದ ನಿರ್ದೇಶಕರಾಗಿದ್ದರು. ನವೀನ್ ಹಕ್ ಲಕ್ನೋ ತಂಡದ ಬೌಲರ್ ಆಗಿದ್ದರು. ಆರ್ ಸಿಬಿ- ಲಕ್ನೋ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ನವೀನ್ ಮತ್ತು ಗೌತಮ್ ಜತೆ ಜಗಳವಾಡಿದ್ದರು. ಇದು ಭಾರಿ ವೈರಲ್ ಆಗಿತ್ತು.

ಈ ಬಾರಿ ಗೌತಮ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದಾರೆ. ಇತ್ತೀಚೆಗೆ ನಡೆದ ಕೆಕೆಆರ್- ಆರ್ ಸಿಬಿ ಪಂದ್ಯದ ವೇಳೆ ವಿರಾಟ್- ಗೌತಮ್ ವಿಚಾರವಾಗಿಯೇ ಸಾಕಷ್ಟು ಹೈಪ್ ಸೃಷ್ಟಿಯಾಗಿತ್ತು. ಆದರೆ ವಿರಾಟ್ ಅವರು ಗೌತಮ್ ಅವರನ್ನು ಮೈದಾನದಲ್ಲಿ ತಬ್ಬಿಕೊಳ್ಳುವ ಮೂಲಕ ಎಲ್ಲವೂ ತಣ್ಣಗಾಗಿತ್ತು.

ಅದಕ್ಕೂ ಮೊದಲು ಅಂದರೆ ಭಾರತದಲ್ಲಿ ನಡೆದ ವಿಶ್ವಕಪ್ ಪಂದ್ಯದ ವೇಳೆ ನವೀನ್ ಉಲ್ ಹಕ್ ಅವರನ್ನು ತಬ್ಬಿಕೊಂಡಿದ್ದರು. ಅಲ್ಲಿಗೆ ಕೊಹ್ಲಿ- ನವೀನ್ ವಿಚಾರವೂ ತಣ್ಣಗಾಗಿತ್ತು. ಇದರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ವಿರಾಟ್ ಇದೀಗ ಹೇಳಿದ್ದಾರೆ.

“ನನ್ನ ವರ್ತನೆಯಿಂದ ಜನರು ನಿರಾಶೆಗೊಂಡಿದ್ದಾರೆ. ನಾನು ನವೀನ್ ಅವರನ್ನು ತಬ್ಬಿಕೊಂಡೆ. ನಂತರ ಇನ್ನೊಂದು ದಿನ ಗೌತಿ ಭಾಯ್ ಬಂದು ನನ್ನನ್ನು ತಬ್ಬಿಕೊಂಡರು. ಮಸಾಲಾ ಮುಗಿದ ಕಾರಣ ಹಲವರು ನಿರಾಶೆಗೊಂಡರು” ಎಂದು ವಿರಾಟ್ ಕೊಹ್ಲಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next