Advertisement

ಆರ್‌ಬಿಐ ನಲ್ಲಿ ಸರಕಾರದ ಹಸ್ತಕ್ಷೇಪ: ಆರ್ಥಿಕ ಸ್ಥಿರತೆಗೆ ಅಪಾಯ?

04:11 PM Dec 17, 2018 | udayavani editorial |

ಹೊಸದಿಲ್ಲಿ : ಭಾರತ ಸರಕಾರ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದರಿಂದ ಭಾರತದ ದೀರ್ಘಾವಧಿಯ ಆರ್ಥಿಕ ಸ್ಥಿರತೆಗೆ ಅಪಾಯ ಒದಗಬಹುದು ಎಂದು ಎಸ್‌ ಆ್ಯಂಡ್‌ ಪಿ ಎಚ್ಚರಿಸಿದೆ.

Advertisement

ಹಾಗಿದ್ದರೂ ಭಾರತ ಪ್ರಕೃತ ಶೇ.7ರ ವಾರ್ಷಿಕ ಬೆಳವಣಿಗೆಯನ್ನು (ಜಿಡಿಪಿ) ಹೊಂದಿರುವುದರಿಂದ ಭಾರತ ಸರಕಾರದ ಹೂಡಿಕೆಗಿರುವ ಬಿಬಿಬಿ ಗ್ರೇಡ್‌ ರೇಟಿಂಗ್‌ ಅಂತೆಯೇ ಮುಂದುವರಿಯುವುದಕ್ಕೆ ಅದು ಭರಪೂರ ಸಾಕಾದೀತು ಎಂದು ಸ್ಟಾಂಡರ್ಡ್‌ ಆ್ಯಂಡ್‌ ಪೂರ್‌ (ಎಸ್‌ ಆ್ಯಂಡ್‌ ಪಿ) ಹೇಳಿದೆ. 

ಆರ್‌ಬಿಐ ವ್ಯವಹಾರದಲ್ಲಿ ಭಾರತ ಸರಕಾರದ ಹೆಚ್ಚುತ್ತಿರುವ ಹಸ್ತಕ್ಷೇಪದಿಂದ ಏಶ್ಯದ ಬೃಹತ್‌ ಆರ್ಥಿಕತೆಯ ಬ್ಯಾಂಕಿಂಗ್‌ ವ್ಯವಸ್ಥೆಗೆ ಮತ್ತು ದೇಶದ ದೀರ್ಘಾವಧಿಯ ಆರ್ಥಿಕ ಸ್ಥಿರತೆಗೆ ಅಪಾಯ ಎದುರಾಗಬಹುದು ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next