Advertisement

ಗಂಗೂಲಿ ತಂತ್ರಕ್ಕೆ ರವಿಶಾಸ್ತ್ರಿಯಿಂದ ಪ್ರತಿತಂತ್ರ!

03:20 AM Jul 14, 2017 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ನ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ಆಯ್ಕೆಯಾಗಿರುವುದು ಈಗ ಹಳೆಯ ಸುದ್ದಿ. ಮಳೆ ನಿಂತರೂ ಹನಿ ನಿಲ್ಲಲಿಲ್ಲವೆಂಬಂತೆ ವಿವಾದಗಳು ಮಾತ್ರ ಮುಂದು ವರಿಯುತ್ತಲೇ ಇವೆ. ಬೌಲಿಂಗ್‌ ಕೋಚ್‌ ಆಗಿ ಜಹೀರ್‌ ಖಾನ್‌ರನ್ನು ಬಿಸಿಸಿಐ ನೇಮಿಸಿದ್ದರೂ ತಮ್ಮ ಆಪ್ತ ಭರತ್‌ ಅರುಣ್‌ರನ್ನೂ ಸಹಾಯಕರನ್ನಾಗಿ ನೇಮಿಸಬೇಕೆಂದು ರವಿಶಾಸ್ತ್ರಿ ಆಗ್ರಹಿಸಲಿದ್ದಾರೆಂದು ವರದಿಯಾಗಿದೆ. ಇದು ಬಿಸಿಸಿಐ ಸಲಹಾ ಸಮಿತಿಯಲ್ಲಿರುವ ಸೌರವ್‌ ಗಂಗೂಲಿ ವಿರುದ್ಧ ಸೇಡು ತೀರಿಸಿಕೊಳ್ಳುವ ಯತ್ನ ಎಂದೂ ಹೇಳಲಾಗಿದೆ.

Advertisement

ಗಂಗೂಲಿ ತೀವ್ರ ವಿರೋ ಧದ ನಡುವೆಯೂ ಮೊನ್ನೆ ಯಷ್ಟೇ ರವಿಶಾಸ್ತ್ರಿ ಕೋಚ್‌ ಆಗಿ ಆಯ್ಕೆಯಾಗಲು ಯಶಸ್ವಿಯಾಗಿದ್ದರು. ಇದಕ್ಕೆ ಪ್ರತಿತಂತ್ರ ಮಾಡಿದ ಗಂಗೂಲಿ, ಜಹೀರ್‌ ಖಾನ್‌ರನ್ನು ಬೌಲಿಂಗ್‌ ಕೋಚ್‌ ಮಾಡಿದರೆ ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಮತ್ತೂಂದು ಕಡೆ ದ್ರಾವಿಡ್‌ರನ್ನು ಬ್ಯಾಟಿಂಗ್‌ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಇದಕ್ಕೆ ತಿರುಗೇಟು ನೀಡಲು ಶಾಸ್ತ್ರಿ ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಜಹೀರ್‌ ಅಗತ್ಯವಿರುವ 250 ದಿನಗಳನ್ನು ವರ್ಷದಲ್ಲಿ ನೀಡುವುದಿಲ್ಲ. ಅಲ್ಲದೇ ಅವರ ವೇತನ ಕೂಡ ಇನ್ನೂ ನಿಗದಿಯಾಗಿಲ್ಲ. ಆದ್ದರಿಂದ ಒಬ್ಬ ಪೂರ್ಣಾವಧಿ ಬೌಲಿಂಗ್‌ ಕೋಚ್‌ ಬೇಕೆಂಬುದು ಶಾಸ್ತ್ರಿ ವಾದ.

Advertisement

Udayavani is now on Telegram. Click here to join our channel and stay updated with the latest news.

Next