Advertisement

ಪ.ಬಂಗಾಲದಲ್ಲಿ ರಥಯಾತ್ರೆ: BJP ಕಲ್ಕತ್ತ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ

12:00 PM Dec 07, 2018 | Team Udayavani |

ಕೋಲ್ಕತ : ತನ್ನ ಉದ್ದೇಶಿತ ರಥ ಯಾತ್ರೆಗೆ ಅನುಮತಿ ನಿರಾಕರಿಸಿರುವ ಪಶ್ಚಿಮ ಬಂಗಾಲ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷ ಕಲ್ಕತ್ತ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಅಪೀಲು ಸಲ್ಲಿಸಿದೆ.

Advertisement

ಇಂದು ಶುಕ್ರವಾರ ಮಧ್ಯಾಹ್ನವೇ ಈ ಅಪೀಲು ಜಸ್ಟಿಸ್‌ ಬಿ ಸೋಮದ್ದರ್‌,  ಜಸ್ಟಿಸ್‌ ಎ ಮುಖರ್ಜಿ ಅವರನ್ನು ಒಳಗೊಂಡ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಒಂದು ದಿನದ ಹಿಂದಷ್ಟೇ ಕೂಚ್‌ಬೆಹಾರ್‌ನಲ್ಲಿ ರಥಯಾತ್ರೆ ನಡೆಸುವುದಕ್ಕೆ ಬಿಜೆಪಿಗೆ ಅನುಮತಿ ನೀಡಲು ಕಲ್ಕತ್ತ ಹೈಕೋರ್ಟ್‌ ನ ಏಕ ಸದಸ್ಯ ಪೀಠ ನಿರಾಕರಿಸಿತ್ತು. ಈ ರಥಯಾತ್ರೆಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಹಸಿರು ನಿಶಾನೆ ತೋರಲಿದ್ದರು.

2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಶ್ಚಿಮ ಬಂಗಾಲದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಬಿಜೆಪಿಯ ರಥಯಾತ್ರೆಯಿಂದ ರಾಜ್ಯದಲ್ಲಿನ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿ ಕೋಮು ಸಂಘರ್ಷ ಭುಗಿಲೇಳುವುದೆಂಬ ಕಾರಣಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು ಎಂದು ಈ ಹಿಂದೆ ವರದಿಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next