Advertisement

ಕೆ.ಜಿ.ದ್ರಾಕ್ಷಿ 7 ರೂ.ಗೂ ಖರೀದಿಸುವವರಿಲ್ಲ

05:01 PM May 04, 2020 | Suhan S |

ಚಿಕ್ಕಬಳ್ಳಾಪುರ: ಕೆ.ಜಿ. ದ್ರಾಕ್ಷಿ ಕೇವಲ 7 ರೂ.ಗೆ ಕೊಡುತ್ತೇವೆ ಬಂದು ಕಟಾವು ಮಾಡಿಕೊಂಡು ಹೋಗಿ ಅಂದರೂ ವ್ಯಾಪಾರಸ್ಥರು ಯಾರು ದ್ರಾಕ್ಷಿ ತೋಟದ ಕಡೆಗೆ ತಲೆ ಹಾಕದಿದ್ದಕ್ಕೆ ಚಿಕ್ಕ ಬಳ್ಳಾಪುರ ತಾಲೂಕಿನ ದೊಡ್ಡಮರಳಿ ಗ್ರಾಪಂ ವ್ಯಾಪ್ತಿಯ ಡಿ.ಹೊಸೂರಿನ ರೈತ ಹರೀಶ್‌ ತಾನು ಬೆಳೆದಿದ್ದ ಅಪಾರ ಪ್ರಮಾಣದ ದ್ರಾಕ್ಷಿಯನ್ನು ಕಾಡು ಪ್ರಾಣಿಗಳಿಗೆ ನೀಡಿದ್ದಾರೆ.

Advertisement

ಲಾಕ್‌ಡೌನ್‌ ಪರಿಣಾಮ ತಾಲೂಕಿನಲ್ಲಿ ಕಟಾವುಗೆ ಬಂದಿರುವ ದ್ರಾಕ್ಷಿ ಖರೀದಿಗೆ ಹಲವು ದಿನಗಳ ಹಿಂದೆ ಕೆಲ ವ್ಯಾಪಾರಸ್ಥರು ಬಂದರು. ಕಳೆದ ವಾರದಿಂದ ವ್ಯಾಪಾರಸ್ಥರು ಬಂದಿಲ್ಲ. ಇತ್ತೀಚೆಗೆ ತೋಟಗಾರಿಕಾ ಸಚಿವ ನಾರಾ ಯಣಗೌಡ ವೈನರಿಗೆ ದ್ರಾಕ್ಷಿ ಬಳಸಿಕೊಳ್ಳಲಾಗುವುದು. ಇದಕ್ಕೆ ಸಿಎಂ ಸಹ ಅನುಮೋದನೆ ನೀಡಿದ್ದಾರೆ ಎಂದು ಹೇಳಿದ್ದರೂ ಇದುವರೆಗೂ ಕಾರ್ಯಗತಕ್ಕೆ ಬಂದಿಲ್ಲ. ಹರೀಶ್‌ 2.50 ಲಕ್ಷ ರೂ. ಖರ್ಚು ಮಾಡಿದ್ದರೂ ಇದುವರೆಗೂ 70 ಸಾವಿರ ರೂ. ಮಾತ್ರ ಕೈ ಸೇರಿದೆ. ದ್ರಾಕ್ಷಿ ಕಟಾವು ಮಾಡಿ ಕಾಡು ಕೋತಿ ಸೇರಿದಂತೆ ಮತ್ತಿತರ ಪ್ರಾಣಿಗಳಿಗೆ ಎಸೆಯಲಾಗುತ್ತಿದೆ ಎಂದು ಉದಯವಾಣಿ ಜೊತೆಗೆ ಅಳಲು ತೋಡಿ ಕೊಂಡರು. -ಅಲ್ಲದೇ ಸರ್ಕಾರ ಅಗತ್ಯ ನೆರವು ನೀಡಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next