Advertisement

ರ‍್ಯಾಂಕ್‌ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ಎಲ್ಲ ಆ ದೇವರ ದಯೆ: ಸಾಯೀಶ್ ಗೋಣಿ

02:53 PM Apr 21, 2023 | Team Udayavani |

ಹುಬ್ಬಳ್ಳಿ: ‘ಪಾಲಕರ ಬೆಂಬಲ, ಶಿಕ್ಷಕರ ಪ್ರೋತ್ಸಾಹದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್‌ ಗಳಿಸಿರುವ ಸಾಯೀಶ್ ಗೋಣಿ ಹೇಳಿದರು.

Advertisement

ಹುಬ್ಬಳ್ಳಿಯ ಚೌಗಲಾ ಎಜ್ಯುಕೇಷನ್‌ ಸೊಸೈಟಿಯ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇಂಗ್ಲಿಷ್‌– 96, ಸಂಸ್ಕೃತ– 100, ಭೌತವಿಜ್ಞಾನ– 99, ರಸಾಯನ ವಿಜ್ಞಾನ– 99, ಗಣಿತ– 100, ಜೀವವಿಜ್ಞಾನ– 100. ಒಟ್ಟು 594/600 ಅಂಕ ಪಡೆದಿದ್ದಾರೆ.

‘ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದೆ. ರ‍್ಯಾಂಕ್‌ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಎಲ್ಲ ಆ ದೇವರ ದಯೆ’ ಎಂದರು.

‘ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛೆ ಹೊಂದಿದ್ದೇನೆ. ನೀಟ್‌ ಪರೀಕ್ಷೆಗಾಗಿ ತಯಾರಿ ನಡೆಸಿದ್ದೇನೆ. ತಂದೆ ಗುರುಪ್ರಸಾದ ಅವರು ಆಟೊಮೊಬೈಲ್‌ ಬಿಡಿಭಾಗಗಳ ಮಾರಾಟಗಾರರಾಗಿದ್ದಾರೆ. ತಾಯಿ ಶಶಿಕಲಾ ಗೃಹಿಣಿಯಾಗಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next